<p>ಮೂಡಿಗೆರೆ: ‘ದೇಶದ ಸಮಗ್ರ ಅಭಿವೃದ್ಧಿಗೆ ಜನಸಂಖ್ಯಾ ದತ್ತಾಂಶ ಪ್ರಮುಖ ಅಂಶವಾಗುತ್ತದೆ’ ಎಂದು ತಹಶೀಲ್ದಾರ್ ಎಸ್. ಅಶ್ವಿನಿ ಹೇಳಿದರು.</p>.<p>ಪಟ್ಟಣದ ಡಿ.ಎಸ್. ಬಿಳೀಗೌಡ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಜನಗಣತಿ 2027ರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಜನಗಣತಿಯು ದೇಶದ ಆರ್ಥಿಕ ಚಟುವಟಿಕೆ, ಪ್ರಗತಿಪರ ಯೋಜನೆಗಳನ್ನು ಜಾರಿಗೊಳಿಸಲು ಸಹಾಯಕವಾಗುತ್ತದೆ. ಪ್ರತಿಯೊಬ್ಬ ಗಣತಿದಾರರಿಗೂ ತಾನು ಗಣತಿ ಕಾರ್ಯದ ಮೂಲಕ ದೇಶದ ಪ್ರಗತಿ ಕಾರ್ಯದಲ್ಲಿ ತೊಡಗಿದ್ದೇನೆ ಎಂಬ ಅಭಿಮಾನವಿರಬೇಕು. ಪ್ರತಿ ಮನೆಯನ್ನು ಸಂಪರ್ಕಿಸಿ ಗಣತಿ ನಡೆಸಬೇಕು. ಈ ಬಾರಿ ಸ್ವಯಂ ಗಣತಿಗೂ ಅವಕಾಶ ಕಲ್ಪಿಸಿದ್ದು, ಸ್ವಯಂ ಗಣತಿ ಮಾಡಿಕೊಳ್ಳುವ ಗಣತಿದಾರರು ಮಾಹಿತಿ ಸಲ್ಲಿಸಿದ ಬಳಿಕ ಸೃಜನೆಯಾಗುವ ಸಂಖ್ಯೆಯನ್ನು ಗಣತಿ ದಾರರಿಗೆ ನೀಡಬೇಕು. ಗಣತಿ ಮಾಹಿತಿಯನ್ನು ಬೇರೆಲ್ಲೂ ಹಂಚಿಕೊಳ್ಳುವುದಿಲ್ಲ.ಹಾಗಾಗಿ ಸಾರ್ವಜನಿಕರು ಯಾವುದೇ ಆತಂಕವಿಲ್ಲದೇ ಮಾಹಿತಿ ನೀಡಬೇಕು’ ಎಂದರು.</p>.<p>ಶಿಕ್ಷಕರ ಸಂಘದ ಪದಾಧಿಕಾರಿ ಬಿ.ಆರ್. ನವೀನ್ ಮಾತನಾಡಿ, ‘ಮಲೆನಾಡಿನಲ್ಲಿ ಸಾಕು ನಾಯಿಗಳ ಸಮಸ್ಯೆಯನ್ನು ಗಣತಿದಾರರು ಎದುರಿಸಬೇಕಾಗುತ್ತದೆ. ಆದ್ದರಿಂದ ಸಾರ್ವಜನಿಕರು ಗಣತಿದಾರರೊಂದಿಗೆ ಮಾಹಿತಿ ನೀಡಲು ಸಹಕರಿಸುವಂತೆ ತಾಲ್ಲೂಕು ಆಡಳಿತದಿಂದ ಸಾರ್ವ ಜನಿಕ ರಿಗೆ ಮಾಹಿತಿ ನೀಡಬೇಕು’ ಎಂದರು.</p>.<p>ಶಿಕ್ಷಕರ ಸಂಘದ ಮಂಜಪ್ಪ, ಶಿರಸ್ತೆದಾರ್ ಬಾಬು, ನಿವೃತ್ತ ಶಿಕ್ಷಕ ರಮೇಶ್, ತರಬೇತುದಾರರಾದ ಶಿವರಾಮೇಗೌಡ, ಸುನೀಲ್, ಶಂಕರ್, ಕೃಷ್ಣರಾಜ ಅರಸ್ ಮಾತನಾಡಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260408-126-1654010571</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೂಡಿಗೆರೆ: ‘ದೇಶದ ಸಮಗ್ರ ಅಭಿವೃದ್ಧಿಗೆ ಜನಸಂಖ್ಯಾ ದತ್ತಾಂಶ ಪ್ರಮುಖ ಅಂಶವಾಗುತ್ತದೆ’ ಎಂದು ತಹಶೀಲ್ದಾರ್ ಎಸ್. ಅಶ್ವಿನಿ ಹೇಳಿದರು.</p>.<p>ಪಟ್ಟಣದ ಡಿ.ಎಸ್. ಬಿಳೀಗೌಡ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಜನಗಣತಿ 2027ರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಜನಗಣತಿಯು ದೇಶದ ಆರ್ಥಿಕ ಚಟುವಟಿಕೆ, ಪ್ರಗತಿಪರ ಯೋಜನೆಗಳನ್ನು ಜಾರಿಗೊಳಿಸಲು ಸಹಾಯಕವಾಗುತ್ತದೆ. ಪ್ರತಿಯೊಬ್ಬ ಗಣತಿದಾರರಿಗೂ ತಾನು ಗಣತಿ ಕಾರ್ಯದ ಮೂಲಕ ದೇಶದ ಪ್ರಗತಿ ಕಾರ್ಯದಲ್ಲಿ ತೊಡಗಿದ್ದೇನೆ ಎಂಬ ಅಭಿಮಾನವಿರಬೇಕು. ಪ್ರತಿ ಮನೆಯನ್ನು ಸಂಪರ್ಕಿಸಿ ಗಣತಿ ನಡೆಸಬೇಕು. ಈ ಬಾರಿ ಸ್ವಯಂ ಗಣತಿಗೂ ಅವಕಾಶ ಕಲ್ಪಿಸಿದ್ದು, ಸ್ವಯಂ ಗಣತಿ ಮಾಡಿಕೊಳ್ಳುವ ಗಣತಿದಾರರು ಮಾಹಿತಿ ಸಲ್ಲಿಸಿದ ಬಳಿಕ ಸೃಜನೆಯಾಗುವ ಸಂಖ್ಯೆಯನ್ನು ಗಣತಿ ದಾರರಿಗೆ ನೀಡಬೇಕು. ಗಣತಿ ಮಾಹಿತಿಯನ್ನು ಬೇರೆಲ್ಲೂ ಹಂಚಿಕೊಳ್ಳುವುದಿಲ್ಲ.ಹಾಗಾಗಿ ಸಾರ್ವಜನಿಕರು ಯಾವುದೇ ಆತಂಕವಿಲ್ಲದೇ ಮಾಹಿತಿ ನೀಡಬೇಕು’ ಎಂದರು.</p>.<p>ಶಿಕ್ಷಕರ ಸಂಘದ ಪದಾಧಿಕಾರಿ ಬಿ.ಆರ್. ನವೀನ್ ಮಾತನಾಡಿ, ‘ಮಲೆನಾಡಿನಲ್ಲಿ ಸಾಕು ನಾಯಿಗಳ ಸಮಸ್ಯೆಯನ್ನು ಗಣತಿದಾರರು ಎದುರಿಸಬೇಕಾಗುತ್ತದೆ. ಆದ್ದರಿಂದ ಸಾರ್ವಜನಿಕರು ಗಣತಿದಾರರೊಂದಿಗೆ ಮಾಹಿತಿ ನೀಡಲು ಸಹಕರಿಸುವಂತೆ ತಾಲ್ಲೂಕು ಆಡಳಿತದಿಂದ ಸಾರ್ವ ಜನಿಕ ರಿಗೆ ಮಾಹಿತಿ ನೀಡಬೇಕು’ ಎಂದರು.</p>.<p>ಶಿಕ್ಷಕರ ಸಂಘದ ಮಂಜಪ್ಪ, ಶಿರಸ್ತೆದಾರ್ ಬಾಬು, ನಿವೃತ್ತ ಶಿಕ್ಷಕ ರಮೇಶ್, ತರಬೇತುದಾರರಾದ ಶಿವರಾಮೇಗೌಡ, ಸುನೀಲ್, ಶಂಕರ್, ಕೃಷ್ಣರಾಜ ಅರಸ್ ಮಾತನಾಡಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260408-126-1654010571</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>