ಚೆನ್ನೈ: ಅಣ್ಣಾ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಡಾ. ಎಂ.ಕೆ. ಸೂರಪ್ಪ ಅವರ ನೇಮಕದಲ್ಲಿ ‘ಪಾರದರ್ಶಕ ಹಾಗೂ ನ್ಯಾಯಯುತ’ ಪ್ರಕ್ರಿಯೆ ಅನುಸರಿಸಲಾಗಿದೆ ಎಂದು ರಾಜಭವನ ಶನಿವಾರ ಸ್ಪಷ್ಟನೆ ನೀಡಿದೆ.
ಅಣ್ಣಾ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ನೇಮಕಾತಿ ಕುರಿತು ಯಾವುದೇ ರೀತಿಯ ರಾಜಕೀಯ ಮಾಡದಂತೆ ರಾಜಭವನ ಮನವಿ ಮಾಡಿದೆ.
ತಮಿಳುನಾಡು ರಾಜ್ಯಪಾಲ ಬನವಾರಿಲಾಲ್ ಪುರೋಹಿತ್ ಅವರು ಕನ್ನಡಿಗ ಸೂರಪ್ಪ ಅವರನ್ನು ಕುಲಪತಿ ಹುದ್ದೆಗೆ ನೇಮಕಗೊಳಿಸಿದ ಬಳಿಕ ತಮಿಳುನಾಡಿನ ವಿರೋಧ ಪಕ್ಷಗಳು ಸಾಕಷ್ಟು ಟೀಕೆ ವ್ಯಕ್ತಪಡಿಸಿದ್ದವು. ಹೀಗಾಗಿ ರಾಜಭವನ ಈ ಸ್ಪಷ್ಟನೆ ನೀಡಿದೆ.