ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲಾಕ್ಡೌನ್ ಜಾರಿಯಾದಗಿನಿಂದ ಅರ್ಚಕರು, ಚಮ್ಮಾರರು, ಅಕ್ಕಸಾಲಿಗರು, ಬಡಗಿಗಳು, ಶಿಲ್ಪಿಗಳು, ಕಮ್ಮಾರರು, ಟೈಲರ್ಗಳು ಸೇರಿದಂತೆ ವಿವಿಧ ವರ್ಗದವರು ಮನೆಯಿಂದ ಹೊರಗೆ ಬಂದಿಲ್ಲ. ಆದರೆ, ಮುಖ್ಯಮಂತ್ರಿಯು ಘೋಷಿಸಿರುವ ಶ್ರಮಿಕರ ಪ್ಯಾಕೇಜಿನಲ್ಲಿ ಈ ಎಲ್ಲಾ ವರ್ಗಗಳನ್ನು ಕೈಬಿಟ್ಟಿರುವುದು ಸರಿಯಲ್ಲ. ಈ ಪ್ಯಾಕೇಜ್ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬ ನೀತಿಯನ್ನು ಅನುಸರಿಸಿದಂತಿದೆ’ ಎಂದು ಟೀಕಿಸಿದರು.