ಗುರುವಾರ ಮುಂಜಾನೆ ರಂಗಮಂದಿರದಲ್ಲಿ ಜನರು ಗುಂಪಾಗಿರುವುದನ್ನು ತಿಳಿದ ಸ್ಥಳೀಯ ಯುವಕರು ತಹಶೀಲ್ದಾರ್ಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ತಹಶೀಲ್ದಾರ್ ರಮೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್, ಎಲ್ಲಾ ಕಾರ್ಮಿಕರನ್ನು ವಿದ್ಯಾರ್ಥಿನಿಲಯಕ್ಕೆ ಕರೆದೊಯ್ದು ಆಶ್ರಯ ಒದಗಿಸಿದ್ದರು. ಕಾರ್ಮಿಕರೊಂದಿಗೆ ಸುಮಾರು ಎಂಟಕ್ಕೂ ಅಧಿಕ ಮಕ್ಕಳಿದ್ದು, ಉಪಾಹಾರಕ್ಕಾಗಿ ಪರದಾಡುತ್ತಿದ್ದರು.