<p><strong>ಚಿಕ್ಕಮಗಳೂರು:</strong> ಜಿಲ್ಲೆಯ ಮೂಡಿಗೆರೆ, ಆಲ್ದೂರು, ಕಳಸ, ಬಾಳೆಹೊನ್ನೂರು, ನರಸಿಂಹರಾಜಪುರದ ವಿವಿಧೆಡೆ ಬ್ಯಾರಿ ಸಮುದಾಯದವರು ಶುಕ್ರವಾರ ಸಂಭ್ರಮದಿಂದ ಈದ್ ಉಲ್ ಫಿತ್ರ್ ಆಚರಿಸಿದರು.</p><p>ಚಂದ್ರದರ್ಶನ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಬ್ಯಾರಿ ಸಮುದಾಯದವರು ಹಬ್ಬ ಆಚರಣೆಯ ನಿರ್ಧಾರ ಪ್ರಕಟಿಸಿದರು.</p><p>ಮೂಡಿಗೆರೆ ಪಟ್ಟಣದ ಬದ್ರಿಯಾ ಮಸೀದಿ ಸೇರಿದಂತೆ ತಾಲ್ಲೂಕಿನ ಹ್ಯಾಂಡ್ಪೋಸ್ಟ್, ಬಾಪುನಗರ, ಬಿಳಗುಳ, ಕಿತ್ತಲೇಗಂಡಿ, ಹಂಡುಗುಳಿ, ಚಕಮಕ್ಕಿ, ಬಣಕಲ್ ಸೇರಿದಂತೆ ವಿವಿಧೆಡೆ ಬೆಳಿಗ್ಗೆ ರಂಜಾನ್ ವಿಶೇಷ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡಿಕೊಂಡರು. ಬಳಿಕ ಕಬರಿಸ್ತಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಮಸೀದಿಗಳಲ್ಲಿ ರಂಜಾನ್ ಪ್ರವಚನಗಳು ನಡೆದವು.</p>. <h2>‘ಯುದ್ಧ ಕೊನೆಗೊಂಡು ಶಾಂತಿ ನೆಲೆಸಲಿ’</h2><p>ಜಯಪುರ (ಬಾಳೆಹೊನ್ನೂರು): ‘ಹಬ್ಬಗಳು ಶಾಂತಿ ಸೌಹಾರ್ದದ ಸಂಕೇತ. ಜಗತ್ತಿನ ಎಲ್ಲಡೆ ಅಶಾಂತಿ ತುಂಬಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳು ಮಾತುಕತೆ ಮೂಲಕ ಅಂತ್ಯಗೊಳ್ಳಬೇಕು’ ಎಂದು ಬದ್ರಿಯಾ ಜುಮಾ ಮಸೀದಿ ಧರ್ಮಗುರು ಡಿ. ಹಸನ್ ಸಖಾಫಿ ಹೇಳಿದರು.</p><p>ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆದ ಈದ್ ಉಲ್ ಫಿತ್ರ್ ಹಬ್ಬದಲ್ಲಿ ಮಾತನಾಡಿದ ಅವರು, ಯುದ್ಧಗಳಿಂದ ಅಮಾಯಕರು ಬಲಿಯಾಗುತ್ತಿದ್ದಾರೆ. ವಿಶ್ವದಲ್ಲಿ ಶಾಂತಿ ಸ್ಥಾಪನೆಗಾಗಿ ಎಲ್ಲರೂ ಪ್ರಾರ್ಥನೆ ಸಲ್ಲಿಸಬೇಕು. ಎಲ್ಲಾ ಧರ್ಮಗಳ ಜನರೂ ಶಾಂತಿ, ಸಹಬಾಳ್ವೆಗಾಗಿ ಕೈ ಜೋಡಿಸಬೇಕು. ಭಾರತೀಯರಾದ ನಾವು ಕುರ್ಆನ್ ಮತ್ತು ಸಂವಿಧಾನವನ್ನು ಸಮಾನವಾಗಿ ಗೌರವಿಸಿ ಅನುಸರಿಸಬೇಕು ಎಂದರು. ಕಬರಿಸ್ತಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.</p><h2>‘ಕೆಡುಕನ್ನು ಬಿಡಿ, ಒಳಿತಾಗಲಿ’</h2><p>ಆಲ್ದೂರು: ಇಲ್ಲಿಗೆ ಸಮೀಪದ ಹಾಂದಿಯ ಖಿಲಾರಿಯ ಜುಮಾ ಮಸೀದಿಯಲ್ಲಿ ಭಕ್ತಿ ಭಾವದಿಂದ ಈದ್ ಉಲ್ ಫಿತ್ರ್ ಆಚರಿಸಲಾಯಿತು.</p><p>ಮಸೀದಿಯ ಖಾತೀಬ್ ಕಯ್ಯುಮ್ ಫೈಝಿ ನಮಾಜ್ ನೇತೃತ್ವ ವಹಿಸಿದ್ದರು. ‘ರಂಜಾನ್ ಪ್ರಯುಕ್ತ 40 ದಿನಗಳ ಉಪವಾಸ ಕೈಗೊಂಡು ಕೆಡುಕಿನಿಂದ ಪರಿವರ್ತನೆ ಹೊಂದಿ ಒಳಿತನ್ನು ಬದುಕಿಗೆ ಅಳವಡಿಸಿಕೊಳ್ಳೋಣ. ಶಾಂತಿ, ಪ್ರೀತಿ, ಸಹೋದರತ್ವದಿಂದ ಸರ್ವ ಸಮುದಾಯವನ್ನು ಗೌರವಿಸಿ ಸಹಬಾಳ್ವೆ ನಡೆಸೋಣ’ ಎಂದು ಸಂದೇಶ ನೀಡಿದರು.</p><p>ಸದರ್ ಉಮರ್ ಫಾರೂಕ್, ಹಸನಬ್ಬ, ಇಬ್ರಾಹಿಂ, ಮಸೀದಿ ಅಧ್ಯಕ್ಷ ಸೈಯದ್, ಸಮಿತಿ ಸದಸ್ಯರಾದ ಶರೀಫ್, ಕಲಂದರ್, ಸಲೀಂ, ಉಮರ್, ಖಾಸಿಂ ,ಅಬ್ದುಲ್ ರೆಹಮಾನ್ ಭಾಗವಹಿಸಿದ್ದರು.</p><h2>ಹಿರಿಯರಿಗೆ ಗೌರವ</h2><p>ಕಳಸ: ತಾಲ್ಲೂಕಿನಾದ್ಯಂತ ಶುಕ್ರವಾರ ಸಡಗರದಿಂದ ಈದ್ ಉಲ್ ಫಿತ್ರ್ ಆಚರಿಸಲಾಯಿತು. ಮುಸ್ಲಿಮರು ಮಸೀದಿ ಆವರಣದಲ್ಲಿ ಪರಸ್ಪರರನ್ನು ಆಲಂಗಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಸ್ಮಶಾನಕ್ಕೆ ತೆರಳಿ ಹಿರಿಯರಿಗೆ ಗೌರವ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ಜಿಲ್ಲೆಯ ಮೂಡಿಗೆರೆ, ಆಲ್ದೂರು, ಕಳಸ, ಬಾಳೆಹೊನ್ನೂರು, ನರಸಿಂಹರಾಜಪುರದ ವಿವಿಧೆಡೆ ಬ್ಯಾರಿ ಸಮುದಾಯದವರು ಶುಕ್ರವಾರ ಸಂಭ್ರಮದಿಂದ ಈದ್ ಉಲ್ ಫಿತ್ರ್ ಆಚರಿಸಿದರು.</p><p>ಚಂದ್ರದರ್ಶನ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಬ್ಯಾರಿ ಸಮುದಾಯದವರು ಹಬ್ಬ ಆಚರಣೆಯ ನಿರ್ಧಾರ ಪ್ರಕಟಿಸಿದರು.</p><p>ಮೂಡಿಗೆರೆ ಪಟ್ಟಣದ ಬದ್ರಿಯಾ ಮಸೀದಿ ಸೇರಿದಂತೆ ತಾಲ್ಲೂಕಿನ ಹ್ಯಾಂಡ್ಪೋಸ್ಟ್, ಬಾಪುನಗರ, ಬಿಳಗುಳ, ಕಿತ್ತಲೇಗಂಡಿ, ಹಂಡುಗುಳಿ, ಚಕಮಕ್ಕಿ, ಬಣಕಲ್ ಸೇರಿದಂತೆ ವಿವಿಧೆಡೆ ಬೆಳಿಗ್ಗೆ ರಂಜಾನ್ ವಿಶೇಷ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡಿಕೊಂಡರು. ಬಳಿಕ ಕಬರಿಸ್ತಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಮಸೀದಿಗಳಲ್ಲಿ ರಂಜಾನ್ ಪ್ರವಚನಗಳು ನಡೆದವು.</p>. <h2>‘ಯುದ್ಧ ಕೊನೆಗೊಂಡು ಶಾಂತಿ ನೆಲೆಸಲಿ’</h2><p>ಜಯಪುರ (ಬಾಳೆಹೊನ್ನೂರು): ‘ಹಬ್ಬಗಳು ಶಾಂತಿ ಸೌಹಾರ್ದದ ಸಂಕೇತ. ಜಗತ್ತಿನ ಎಲ್ಲಡೆ ಅಶಾಂತಿ ತುಂಬಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳು ಮಾತುಕತೆ ಮೂಲಕ ಅಂತ್ಯಗೊಳ್ಳಬೇಕು’ ಎಂದು ಬದ್ರಿಯಾ ಜುಮಾ ಮಸೀದಿ ಧರ್ಮಗುರು ಡಿ. ಹಸನ್ ಸಖಾಫಿ ಹೇಳಿದರು.</p><p>ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆದ ಈದ್ ಉಲ್ ಫಿತ್ರ್ ಹಬ್ಬದಲ್ಲಿ ಮಾತನಾಡಿದ ಅವರು, ಯುದ್ಧಗಳಿಂದ ಅಮಾಯಕರು ಬಲಿಯಾಗುತ್ತಿದ್ದಾರೆ. ವಿಶ್ವದಲ್ಲಿ ಶಾಂತಿ ಸ್ಥಾಪನೆಗಾಗಿ ಎಲ್ಲರೂ ಪ್ರಾರ್ಥನೆ ಸಲ್ಲಿಸಬೇಕು. ಎಲ್ಲಾ ಧರ್ಮಗಳ ಜನರೂ ಶಾಂತಿ, ಸಹಬಾಳ್ವೆಗಾಗಿ ಕೈ ಜೋಡಿಸಬೇಕು. ಭಾರತೀಯರಾದ ನಾವು ಕುರ್ಆನ್ ಮತ್ತು ಸಂವಿಧಾನವನ್ನು ಸಮಾನವಾಗಿ ಗೌರವಿಸಿ ಅನುಸರಿಸಬೇಕು ಎಂದರು. ಕಬರಿಸ್ತಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.</p><h2>‘ಕೆಡುಕನ್ನು ಬಿಡಿ, ಒಳಿತಾಗಲಿ’</h2><p>ಆಲ್ದೂರು: ಇಲ್ಲಿಗೆ ಸಮೀಪದ ಹಾಂದಿಯ ಖಿಲಾರಿಯ ಜುಮಾ ಮಸೀದಿಯಲ್ಲಿ ಭಕ್ತಿ ಭಾವದಿಂದ ಈದ್ ಉಲ್ ಫಿತ್ರ್ ಆಚರಿಸಲಾಯಿತು.</p><p>ಮಸೀದಿಯ ಖಾತೀಬ್ ಕಯ್ಯುಮ್ ಫೈಝಿ ನಮಾಜ್ ನೇತೃತ್ವ ವಹಿಸಿದ್ದರು. ‘ರಂಜಾನ್ ಪ್ರಯುಕ್ತ 40 ದಿನಗಳ ಉಪವಾಸ ಕೈಗೊಂಡು ಕೆಡುಕಿನಿಂದ ಪರಿವರ್ತನೆ ಹೊಂದಿ ಒಳಿತನ್ನು ಬದುಕಿಗೆ ಅಳವಡಿಸಿಕೊಳ್ಳೋಣ. ಶಾಂತಿ, ಪ್ರೀತಿ, ಸಹೋದರತ್ವದಿಂದ ಸರ್ವ ಸಮುದಾಯವನ್ನು ಗೌರವಿಸಿ ಸಹಬಾಳ್ವೆ ನಡೆಸೋಣ’ ಎಂದು ಸಂದೇಶ ನೀಡಿದರು.</p><p>ಸದರ್ ಉಮರ್ ಫಾರೂಕ್, ಹಸನಬ್ಬ, ಇಬ್ರಾಹಿಂ, ಮಸೀದಿ ಅಧ್ಯಕ್ಷ ಸೈಯದ್, ಸಮಿತಿ ಸದಸ್ಯರಾದ ಶರೀಫ್, ಕಲಂದರ್, ಸಲೀಂ, ಉಮರ್, ಖಾಸಿಂ ,ಅಬ್ದುಲ್ ರೆಹಮಾನ್ ಭಾಗವಹಿಸಿದ್ದರು.</p><h2>ಹಿರಿಯರಿಗೆ ಗೌರವ</h2><p>ಕಳಸ: ತಾಲ್ಲೂಕಿನಾದ್ಯಂತ ಶುಕ್ರವಾರ ಸಡಗರದಿಂದ ಈದ್ ಉಲ್ ಫಿತ್ರ್ ಆಚರಿಸಲಾಯಿತು. ಮುಸ್ಲಿಮರು ಮಸೀದಿ ಆವರಣದಲ್ಲಿ ಪರಸ್ಪರರನ್ನು ಆಲಂಗಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಸ್ಮಶಾನಕ್ಕೆ ತೆರಳಿ ಹಿರಿಯರಿಗೆ ಗೌರವ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>