ವಿಶೇಷ ಪರಿಹಾರಕ್ಕೆ ಮನವಿ: ಭತ್ತ ಜೊಳ್ಳಾಗಿರುವುದರಿಂದ ಬೆಳೆಯನ್ನು ಕಟಾವುಗೊಳಿಸಿ, ಒಕ್ಕಣೆ ಮಾಡಿದರೂ ಅದರ ಖರ್ಚು ಸಹ ಬರುವುದಿಲ್ಲ. ಕೃಷಿ ವಿಜ್ಞಾನ ಕೇಂದ್ರದಿಂದಲೇ ಬೀಜದ ಭತ್ತವನ್ನು ಖರೀದಿಸಿ ತಂದು ನಾಟಿ ಮಾಡಲಾಗಿತ್ತು. ಸಾಲ ಮಾಡಿ ಅಗಡಿ ನಿರ್ಮಾಣ, ನಾಟಿ, ಕಳೆ ಸೇರಿದಂತೆ ಗೊಬ್ಬರ, ಔಷಧಿಗೆ ಖರ್ಚು ಮಾಡಲಾಗಿತ್ತು. ಈಗ ನೋಡಿದರೆ ಗದ್ದೆಗೆ ಗದ್ದೆಯೇ ಜೊಳ್ಳು ಬಿದ್ದಿದೆ. ಜೊಳ್ಳಾಗಿರುವ ಗದ್ದೆಗಳನ್ನು ಸಮೀಕ್ಷೆ ನಡೆಸಿ, ವಿಶೇಷ ಪರಿಹಾರ ನೀಡಬೇಕು’ ಎಂದು ರೈತ ಬಡವನದಿಣ್ಣೆ ಲಕ್ಷ್ಮಣ ಗೌಡ ಒತ್ತಾಯಿಸಿದರು.