<p><strong>ನರಸಿಪುರ</strong> (ಎನ್.ಆರ್.ಪುರ): ತಾಲ್ಲೂಕಿನ ನರಸಿಪುರ ಗ್ರಾಮದ ಪಾತಾಳ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ‘ನರಸಿಂಹ ಜಯಂತಿ ಮತ್ತು ಕವಚ ಧಾರಣೆ ಮಹೋತ್ಸವ’ ವಿಜೃಂಭಣೆಯಿಂದ ನಡೆಯಿತು.</p>.<p>ಶೃಂಗೇರಿಯ ದಿವಾಕರ್ ಭಟ್ರ ನೇತೃತ್ವದಲ್ಲಿ ಪುಣ್ಯಾಹ ವಾಚನ, ಕಲಶ ಪೂಜೆ, ಅಭಿಷೇಕ, ಕಲಾಹೋಮ, ಕವಚ ಧಾರಣೆ ಪ್ರಯುಕ್ತ ಅಗ್ನಿಸೂಕ್ತ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಜರುಗಿತು. ಭಕ್ತರಿಗೆ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.</p>.<p>ದಿ.ಎಚ್.ಎಸ್.ಶಿವಸ್ವಾಮಿ, ಪದ್ಮಾ ಶಿವಸ್ವಾಮಿ, ಮಕ್ಕಳಾದ ಸ್ವರೂಪ ಹೊಸಕೆರೆ, ಮಾಲಿನಿ ಹೊಸಕೆರೆ ಮೊಮ್ಮಕ್ಕಳು ಮತ್ತು ಕುಟುಂಬಸ್ಥರು ನರಸಿಂಹಸ್ವಾಮಿಗೆ ರಜತ (ಬೆಳ್ಳಿಕವಚ) ದಾನವಾಗಿ ನೀಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಜಯರಾಮಗೌಡ, ಅರ್ಚಕರಾದ ರವಿಭಟ್, ಪ್ರಶಾಂತ್ ಭಟ್ ಇದ್ದರು.</p>.<p><span class="bold"><strong>ದೇವಸ್ಥಾನದ ಹಿನ್ನೆಲೆ:</strong> </span>ಪಾತಾಳ ನರಸಿಂಹ ದೇವಾಲಯವು ಹೊಯ್ಸಳರ ಕಾಲದಲ್ಲಿ ನಿರ್ಮಿಸಿರಬಹುದೆಂದು ದೇವಸ್ಥಾನದ ಆವರಣದಲ್ಲಿ ಲಭ್ಯವಿರುವ ಶಾಸನಗಳಿಂದ ತಿಳಿದು ಬರುತ್ತದೆ. ಬೆಂಜಮಿನ್ ಲೂಯಿರೈಸ್ ಅವರು 1908ರಲ್ಲಿ ಪ್ರಕಟಿಸಿರುವ ಎಫಿಗ್ರಾಫಿಯ ಕರ್ನಾಟಕದ 6ನೇ ಸಂಪುಟದಲ್ಲಿ ಈ ತಾಲ್ಲೂಕಿನಲ್ಲಿರುವ ಶಾಸನಗಳನ್ನು ಕೊಪ್ಪ ತಾಲ್ಲೂಕಿನಲ್ಲಿ ಸೇರಿಸಿದ್ದಾರೆ. ದೇವಸ್ಥಾನ ನಿರ್ಮಾಣದ ಬಗ್ಗೆ ಮಾಹಿತಿ ಲಭ್ಯವಾಗದಿದ್ದರೂ ಈ ದೇಗುಲದ ಮುಂಭಾಗದಲ್ಲಿರುವ ಕಲ್ಲಿನಿಂದ ಹಲವು ಅಂಶಗಳು ಬೆಳಕಿಗೆ ಬರುತ್ತವೆ. ಶಿಲೆಗಳಲ್ಲಿ ಬರೆದಿರುವ ಅಂಶಗಳನ್ನು ಗಮನಿಸಿದರೆ ಪಾತಾಳ ನರಸಿಂಹ ಶಕ್ತಿಶಾಲಿ ದೇವರು ಎಂಬುದೂ ತಿಳಿದು ಬರುತ್ತದೆ. ದೇವಸ್ಥಾನದ ಆವರಣದಲ್ಲಿ ಪುರಾತನ ಬಾವಿ, ಹಲವು ದೇವತೆಗಳ ವಿಗ್ರಹಗಳೂ ಇವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರಸಿಪುರ</strong> (ಎನ್.ಆರ್.ಪುರ): ತಾಲ್ಲೂಕಿನ ನರಸಿಪುರ ಗ್ರಾಮದ ಪಾತಾಳ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ‘ನರಸಿಂಹ ಜಯಂತಿ ಮತ್ತು ಕವಚ ಧಾರಣೆ ಮಹೋತ್ಸವ’ ವಿಜೃಂಭಣೆಯಿಂದ ನಡೆಯಿತು.</p>.<p>ಶೃಂಗೇರಿಯ ದಿವಾಕರ್ ಭಟ್ರ ನೇತೃತ್ವದಲ್ಲಿ ಪುಣ್ಯಾಹ ವಾಚನ, ಕಲಶ ಪೂಜೆ, ಅಭಿಷೇಕ, ಕಲಾಹೋಮ, ಕವಚ ಧಾರಣೆ ಪ್ರಯುಕ್ತ ಅಗ್ನಿಸೂಕ್ತ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಜರುಗಿತು. ಭಕ್ತರಿಗೆ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.</p>.<p>ದಿ.ಎಚ್.ಎಸ್.ಶಿವಸ್ವಾಮಿ, ಪದ್ಮಾ ಶಿವಸ್ವಾಮಿ, ಮಕ್ಕಳಾದ ಸ್ವರೂಪ ಹೊಸಕೆರೆ, ಮಾಲಿನಿ ಹೊಸಕೆರೆ ಮೊಮ್ಮಕ್ಕಳು ಮತ್ತು ಕುಟುಂಬಸ್ಥರು ನರಸಿಂಹಸ್ವಾಮಿಗೆ ರಜತ (ಬೆಳ್ಳಿಕವಚ) ದಾನವಾಗಿ ನೀಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಜಯರಾಮಗೌಡ, ಅರ್ಚಕರಾದ ರವಿಭಟ್, ಪ್ರಶಾಂತ್ ಭಟ್ ಇದ್ದರು.</p>.<p><span class="bold"><strong>ದೇವಸ್ಥಾನದ ಹಿನ್ನೆಲೆ:</strong> </span>ಪಾತಾಳ ನರಸಿಂಹ ದೇವಾಲಯವು ಹೊಯ್ಸಳರ ಕಾಲದಲ್ಲಿ ನಿರ್ಮಿಸಿರಬಹುದೆಂದು ದೇವಸ್ಥಾನದ ಆವರಣದಲ್ಲಿ ಲಭ್ಯವಿರುವ ಶಾಸನಗಳಿಂದ ತಿಳಿದು ಬರುತ್ತದೆ. ಬೆಂಜಮಿನ್ ಲೂಯಿರೈಸ್ ಅವರು 1908ರಲ್ಲಿ ಪ್ರಕಟಿಸಿರುವ ಎಫಿಗ್ರಾಫಿಯ ಕರ್ನಾಟಕದ 6ನೇ ಸಂಪುಟದಲ್ಲಿ ಈ ತಾಲ್ಲೂಕಿನಲ್ಲಿರುವ ಶಾಸನಗಳನ್ನು ಕೊಪ್ಪ ತಾಲ್ಲೂಕಿನಲ್ಲಿ ಸೇರಿಸಿದ್ದಾರೆ. ದೇವಸ್ಥಾನ ನಿರ್ಮಾಣದ ಬಗ್ಗೆ ಮಾಹಿತಿ ಲಭ್ಯವಾಗದಿದ್ದರೂ ಈ ದೇಗುಲದ ಮುಂಭಾಗದಲ್ಲಿರುವ ಕಲ್ಲಿನಿಂದ ಹಲವು ಅಂಶಗಳು ಬೆಳಕಿಗೆ ಬರುತ್ತವೆ. ಶಿಲೆಗಳಲ್ಲಿ ಬರೆದಿರುವ ಅಂಶಗಳನ್ನು ಗಮನಿಸಿದರೆ ಪಾತಾಳ ನರಸಿಂಹ ಶಕ್ತಿಶಾಲಿ ದೇವರು ಎಂಬುದೂ ತಿಳಿದು ಬರುತ್ತದೆ. ದೇವಸ್ಥಾನದ ಆವರಣದಲ್ಲಿ ಪುರಾತನ ಬಾವಿ, ಹಲವು ದೇವತೆಗಳ ವಿಗ್ರಹಗಳೂ ಇವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>