<p><strong>ನರಸಿಂಹರಾಜಪುರ</strong>: ದೇಶಕ್ಕೆ, ಸೈನಿಕರಿಗೆ ಹಾಗೂ ನಾಗರಿಕರಿಗೆ ಒಳಿತಾಗಲಿ, ದುಷ್ಟಶಕ್ತಿಗಳು ಸಂಹಾರವಾಗಲಿ ಎಂಬ ಉದ್ದೇಶದಿಂದ ಪಾತಾಳ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ನಡೆದ ನರಸಿಂಹ ಜಯಂತಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದು ಶೃಂಗೇರಿ ಕ್ಷೇತ್ರ ಮಲೆನಾಡು ನಾಗರಿಕರ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್ ತಿಳಿಸಿದರು.</p>.<p>ಪಾತಾಳ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರಿಗೆ ಮಾತನಾಡಿದ ಅವರು, ‘ಮಲೆನಾಡು ಭಾಗದಲ್ಲಿ ಪ್ರಸ್ತುತ ಜಾರಿಯಾಗುತ್ತಿರುವ ಅರಣ್ಯ ಕಾಯ್ದೆ, ಕಸ್ತೂರಿರಂಗನ್ ವರದಿಯಿಂದ ರೈತರು ಮತ್ತು ನಾಗರಿಕರು ಆತಂಕದಿಂದ ಬದುಕುವಂತಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾಯ್ದೆಗಳು ಜಾರಿಯಾಗದಂತಾಗಿ, ಜನರು ನೆಮ್ಮದಿ ಬದುಕುಕಟ್ಟಿಕೊಳ್ಳುವಂತಾಗಲಿ. ಅರಣ್ಯದಲ್ಲಿಯೇ ಕಾಡು ಪ್ರಾಣಿಗಳಿಗೆ ಯಥೇಚ್ಛ ಆಹಾರ, ನೀರು ಲಭಿಸುವಂತಾಗಲಿ ಎಂದು ವಿಶೇಷ ಪೂಜೆ ಸಲ್ಲಿಸಲಾಯಿತು’ ಎಂದರು.</p>.<p>ದೇವಸ್ಥಾನ ಸಮಿತಿ ಅಧ್ಯಕ್ಷ ಜಯರಾಮಗೌಡ, ಗ್ರಾಮಸ್ಥರಾದ ರಶ್ಮಿ ದಯಾನಂದ, ನಾರಾಯಣ ಪೂಜಾರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರಸಿಂಹರಾಜಪುರ</strong>: ದೇಶಕ್ಕೆ, ಸೈನಿಕರಿಗೆ ಹಾಗೂ ನಾಗರಿಕರಿಗೆ ಒಳಿತಾಗಲಿ, ದುಷ್ಟಶಕ್ತಿಗಳು ಸಂಹಾರವಾಗಲಿ ಎಂಬ ಉದ್ದೇಶದಿಂದ ಪಾತಾಳ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ನಡೆದ ನರಸಿಂಹ ಜಯಂತಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದು ಶೃಂಗೇರಿ ಕ್ಷೇತ್ರ ಮಲೆನಾಡು ನಾಗರಿಕರ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್ ತಿಳಿಸಿದರು.</p>.<p>ಪಾತಾಳ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರಿಗೆ ಮಾತನಾಡಿದ ಅವರು, ‘ಮಲೆನಾಡು ಭಾಗದಲ್ಲಿ ಪ್ರಸ್ತುತ ಜಾರಿಯಾಗುತ್ತಿರುವ ಅರಣ್ಯ ಕಾಯ್ದೆ, ಕಸ್ತೂರಿರಂಗನ್ ವರದಿಯಿಂದ ರೈತರು ಮತ್ತು ನಾಗರಿಕರು ಆತಂಕದಿಂದ ಬದುಕುವಂತಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾಯ್ದೆಗಳು ಜಾರಿಯಾಗದಂತಾಗಿ, ಜನರು ನೆಮ್ಮದಿ ಬದುಕುಕಟ್ಟಿಕೊಳ್ಳುವಂತಾಗಲಿ. ಅರಣ್ಯದಲ್ಲಿಯೇ ಕಾಡು ಪ್ರಾಣಿಗಳಿಗೆ ಯಥೇಚ್ಛ ಆಹಾರ, ನೀರು ಲಭಿಸುವಂತಾಗಲಿ ಎಂದು ವಿಶೇಷ ಪೂಜೆ ಸಲ್ಲಿಸಲಾಯಿತು’ ಎಂದರು.</p>.<p>ದೇವಸ್ಥಾನ ಸಮಿತಿ ಅಧ್ಯಕ್ಷ ಜಯರಾಮಗೌಡ, ಗ್ರಾಮಸ್ಥರಾದ ರಶ್ಮಿ ದಯಾನಂದ, ನಾರಾಯಣ ಪೂಜಾರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>