<p><strong>ಮಡಬೂರು(ನರಸಿಂಹರಾಜಪುರ):</strong> ಮಡಬೂರು ಗ್ರಾಮದಲ್ಲಿರುವ ದಾನಿವಾಸ ದುರ್ಗಾಂಬ ದೇವಿಯ ರಥೋತ್ಸವವು ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.</p>.<p>ಜಾತ್ರೆಯ ಪ್ರತಿದಿನವೂ ವಿಶೇಷ ಪೂಜೆ ನಡೆಸಲಾಯಿತು. ಜಾತ್ರೆ ಪ್ರಾರಂಭವಾಗುವುದಕ್ಕೆ 15ದಿನ ಮುಂಚಿತವಾಗಿ, ಜಾತ್ರೆ ನಡೆಯುವ ಬಗ್ಗೆ ಸಾರಾ ಹಾಕಲಾಗುತ್ತದೆ. ಅಂದಿನಿಂದ ಗ್ರಾಮಸ್ಥರು ಒಬ್ಬರ ಮನೆಯಲ್ಲಿ ಇನ್ನೊಬ್ಬರು ಉಳಿಯುವುದಿಲ್ಲ. ಅಲ್ಲದೇ ಸಾರಾ ಹಾಕಿದ ದಿನದಿಂದಲೇ ಮಾಂಸಹಾರವನ್ನು ಸಂಪೂರ್ಣವಾಗಿ ತ್ಯಜಿಸಲಾಗುತ್ತದೆ. ಇದರ ಇನ್ನೊಂದು ವಿಶೇಷವೆಂದರೆ ಅಜ್ಜಂಪುರ ಅಂತರಘಟ್ಟ ಜಾತ್ರೆ ನಡೆದ ಒಂದು ತಿಂಗಳ ನಂತರ ಈ ಜಾತ್ರೆ ನಡೆಯುತ್ತದೆ. ಇದು ನಡೆದ ಒಂದು ತಿಂಗಳ ನಂತರ ಪಟ್ಟಣದ ಗುತ್ತ್ಯಮ್ಮ ಜಾತ್ರೆ ನಡೆಯುತ್ತದೆ. ಭದ್ರಾ ಅಣೆಕಟ್ಟನ್ನು ನಿರ್ಮಾಣ ಮಾಡುವ ಮುನ್ನ ಮೂರು ದೇವತೆಗಳನ್ನು ಪ್ರತಿ ದೇವತೆಯ ಜಾತ್ರೆಗೆ ಬರುತ್ತಿದ್ದವು ಈಗ ಈ ಸಂಪ್ರದಾಯ ಕೈಬಿಡಲಾಗಿದೆ.</p>.<p>ಶುಕ್ರವಾರ ಬೆಳಿಗ್ಗೆ 11ರಿಂದಲೇ ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ದೇವಸ್ಥಾನದ ವ್ಯಾಪ್ತಿಯಲ್ಲಿರುವ ಉರಿಚೌಡಿ, ಮಲೆನಾಡು ಚೌಡಿ, ಕೆಂಚರು, ಪಂಜುರವಳ್ಳಿ ದೇವತೆಗಳಿಗೆ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ 12.30ರ ವೇಳೆಗೆ ದೇವಸ್ಥಾನ ಸಮಿತಿಯ ಅಧ್ಯಕ್ಷ ಡಿ.ಸಿ. ದಿವಾಕರ್ ರಥೋತ್ಸವಕ್ಕೆ ಚಾಲನೆ ನೀಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ರಥವನ್ನು ಎಳೆದರು.</p>.<p>ಮಂಡಕ್ಕಿ, ಬಾಳೆಹಣ್ಣನ್ನು ರಥದತ್ತ ತೂರಿ ಜೈಕಾರ ಕೂಗಿದರು. ರಥೋತ್ಸವದ ನಂತರ ಪಾನಕದ ವ್ಯವಸ್ಥೆ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಬೇರೆ, ಬೇರೆ ಊರುಗಳಿಂದ ಭಕ್ತರು ಬಂದಿದ್ದರು. ರಾತ್ರಿ ರಾಜಬೀದಿಯಲ್ಲಿ ರಥೋತ್ಸವ ನಡೆಯಿತು. ಶನಿವಾರ ಬೆಳಿಗ್ಗೆ ಸಾಮೂಹಿಕ ಸತ್ಯನಾರಾಯಣ ವ್ರತ, ರಾತ್ರಿ ಅಮ್ಮನವರ ಪಲ್ಲಕ್ಕಿ ಮೆರವಣಿಗೆ ಮತ್ತು ಬೆಳಗಿನಜಾವ ಕೆಂಡಾರ್ಚನೆ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಬೂರು(ನರಸಿಂಹರಾಜಪುರ):</strong> ಮಡಬೂರು ಗ್ರಾಮದಲ್ಲಿರುವ ದಾನಿವಾಸ ದುರ್ಗಾಂಬ ದೇವಿಯ ರಥೋತ್ಸವವು ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.</p>.<p>ಜಾತ್ರೆಯ ಪ್ರತಿದಿನವೂ ವಿಶೇಷ ಪೂಜೆ ನಡೆಸಲಾಯಿತು. ಜಾತ್ರೆ ಪ್ರಾರಂಭವಾಗುವುದಕ್ಕೆ 15ದಿನ ಮುಂಚಿತವಾಗಿ, ಜಾತ್ರೆ ನಡೆಯುವ ಬಗ್ಗೆ ಸಾರಾ ಹಾಕಲಾಗುತ್ತದೆ. ಅಂದಿನಿಂದ ಗ್ರಾಮಸ್ಥರು ಒಬ್ಬರ ಮನೆಯಲ್ಲಿ ಇನ್ನೊಬ್ಬರು ಉಳಿಯುವುದಿಲ್ಲ. ಅಲ್ಲದೇ ಸಾರಾ ಹಾಕಿದ ದಿನದಿಂದಲೇ ಮಾಂಸಹಾರವನ್ನು ಸಂಪೂರ್ಣವಾಗಿ ತ್ಯಜಿಸಲಾಗುತ್ತದೆ. ಇದರ ಇನ್ನೊಂದು ವಿಶೇಷವೆಂದರೆ ಅಜ್ಜಂಪುರ ಅಂತರಘಟ್ಟ ಜಾತ್ರೆ ನಡೆದ ಒಂದು ತಿಂಗಳ ನಂತರ ಈ ಜಾತ್ರೆ ನಡೆಯುತ್ತದೆ. ಇದು ನಡೆದ ಒಂದು ತಿಂಗಳ ನಂತರ ಪಟ್ಟಣದ ಗುತ್ತ್ಯಮ್ಮ ಜಾತ್ರೆ ನಡೆಯುತ್ತದೆ. ಭದ್ರಾ ಅಣೆಕಟ್ಟನ್ನು ನಿರ್ಮಾಣ ಮಾಡುವ ಮುನ್ನ ಮೂರು ದೇವತೆಗಳನ್ನು ಪ್ರತಿ ದೇವತೆಯ ಜಾತ್ರೆಗೆ ಬರುತ್ತಿದ್ದವು ಈಗ ಈ ಸಂಪ್ರದಾಯ ಕೈಬಿಡಲಾಗಿದೆ.</p>.<p>ಶುಕ್ರವಾರ ಬೆಳಿಗ್ಗೆ 11ರಿಂದಲೇ ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ದೇವಸ್ಥಾನದ ವ್ಯಾಪ್ತಿಯಲ್ಲಿರುವ ಉರಿಚೌಡಿ, ಮಲೆನಾಡು ಚೌಡಿ, ಕೆಂಚರು, ಪಂಜುರವಳ್ಳಿ ದೇವತೆಗಳಿಗೆ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ 12.30ರ ವೇಳೆಗೆ ದೇವಸ್ಥಾನ ಸಮಿತಿಯ ಅಧ್ಯಕ್ಷ ಡಿ.ಸಿ. ದಿವಾಕರ್ ರಥೋತ್ಸವಕ್ಕೆ ಚಾಲನೆ ನೀಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ರಥವನ್ನು ಎಳೆದರು.</p>.<p>ಮಂಡಕ್ಕಿ, ಬಾಳೆಹಣ್ಣನ್ನು ರಥದತ್ತ ತೂರಿ ಜೈಕಾರ ಕೂಗಿದರು. ರಥೋತ್ಸವದ ನಂತರ ಪಾನಕದ ವ್ಯವಸ್ಥೆ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಬೇರೆ, ಬೇರೆ ಊರುಗಳಿಂದ ಭಕ್ತರು ಬಂದಿದ್ದರು. ರಾತ್ರಿ ರಾಜಬೀದಿಯಲ್ಲಿ ರಥೋತ್ಸವ ನಡೆಯಿತು. ಶನಿವಾರ ಬೆಳಿಗ್ಗೆ ಸಾಮೂಹಿಕ ಸತ್ಯನಾರಾಯಣ ವ್ರತ, ರಾತ್ರಿ ಅಮ್ಮನವರ ಪಲ್ಲಕ್ಕಿ ಮೆರವಣಿಗೆ ಮತ್ತು ಬೆಳಗಿನಜಾವ ಕೆಂಡಾರ್ಚನೆ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>