ಚಿಕ್ಕಮಗಳೂರು: ‘ಭಾರತ, ಹಳ್ಳಿ, ಕಸುಬು, ಮೌಲ್ಯ ಕೇಂದ್ರಿತ ಶಿಕ್ಷಣ ನೀಡುವುದು, ಆ ಮೂಲಕ ದೇಶದಲ್ಲಿ ಬದಲಾವಣೆ ತರುವುದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್ಇಪಿ–2020) ಉದ್ದೇಶ’ ಎಂದು ಆಂಧ್ರಪ್ರದೇಶದ ಕೇಂದ್ರ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿಯೂ ಆಗಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರಚನಾ ಸಮಿತಿ ಸದಸ್ಯ ಡಾ.ಟಿ.ವಿ.ಕಟ್ಟೀಮನಿ ಹೇಳಿದರು.