ಎಂಜಿನಿಯರ್ ಚಂದನ್ ಮಾತನಾಡಿ, ‘ಗುಣಮಟ್ಟ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ, ಮುಖ್ಯ ಎಂಜಿನಿಯರ್ ತಿಳಿಸಿದ್ದಾರೆ. ಅದರಂತೆ ಪರಿಶೀಲನೆಗೆ ಬಂದಿದ್ದೇವೆ. ಕಾಮಗಾರಿ ಪರಿಮಾಣ ಪರಿಶೀಲನೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಪರಿಮಾಣ ಪರಿಶೀಲನೆಗೆ ಪ್ರತ್ಯೇಕ ಆದೇಶ ಮಾಡಿದರೆ, ಕ್ರಮ ವಹಿಸುತ್ತೇವೆ’ ಎಂದು ತಿಳಿಸಿದರು.