ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾತ್ಕೋಳಿ ಗ್ರಾಮದ ಸಮೀಪ ಕಾರಿನಲ್ಲಿ ರಸ್ತೆದಾಟುವಾಗ ಹಳ್ಳ ಉಕ್ಕಿ ನೀರುಪಾಲಾಗಿ ಮೃತಪಟ್ಟ ತಾಲ್ಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಕೊಪ್ಪದ ಅರಸಿನಗೆರೆ ನಿವಾಸಿ ಪ್ರಸನ್ನ ಅವರ ಕುಟುಂಬಕ್ಕೆ ಶಾಸಕ ಟಿ.ಡಿ.ರಾಜೇಗೌಡ ಸೋಮವಾರ ₹ 5ಲಕ್ಷದ ಪರಿಹಾರದ ಚೆಕ್ ವಿತರಿಸಿದರು.
ತಹಶೀಲ್ದಾರ್ ಎಸ್.ವಿಶ್ವನಾಥ್, ಕಾಂಗ್ರೆಸ್ ಮುಖಂಡರಾದ ಎ.ಎಲ್.ಮಹೇಶ್, ಬಿ.ಎಲ್.ಪ್ರಶಾಂತ್, ಎಸ್.ಡಿ. ರಾಜೇಂದ್ರ, ಶೇನೋಜ್, ಬೇಸಿಲ್, ಕಿರಣ್ ಹಾಗೂ ಕುಟುಂಬದ ಸದಸ್ಯರು ಇದ್ದರು.