ಸೋಮವಾರ (ಅ.10) ಬೆಳಿಗ್ಗೆ ಸಿದ್ದೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಅಲಂಕಾರ ಸೇವೆ ನಡೆಯುತ್ತದೆ. ಸಂಜೆ ಗೋದೂಳಿ ಲಗ್ನದಲ್ಲಿ ಧ್ವಜಾರೋಹಣ ನಡೆಯಲಿದ್ದು, ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಮರು ದಿವಸ ದೇವರನ್ನು ರಾಜಬೀದಿಯಲ್ಲಿ ಉತ್ಸವ ನಡೆಸಲಾಗುತ್ತದೆ. ಪ್ರತಿದಿನ ಸಂಜೆ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ಹಾಗೂ ನಾಡಿನ ನುಲಿಯ ಚಂದಯ್ಯನವರ ಬಗ್ಗೆ ಪ್ರವಚನ ನಡೆಯುತ್ತದೆ. ದಾಸೋಹದ ವ್ಯವಸ್ಥೆ ಇರುತ್ತದೆ. ಎಂಟನೆಯ ರಾತ್ರಿ ಪಾಕಶಾಲೆಯಲ್ಲಿ ಕರೀಬೇವಿನ ಪೂಜೆ ಸಲ್ಲಿಸಲಾಗುತ್ತದೆ. ಪ್ರಸಾದ ಮಂದಿರದಲ್ಲಿ ಉಳಿಯುವ ಪ್ರಸಾದವನ್ನು ಮರು ವರ್ಷದ ಜಾತ್ರೆವರೆಗೂ ಇರಿಸಲಾಗುತ್ತಿದ್ದು, ಕೆಡದಿರುವುದೇ ಇಲ್ಲಿನ ವಿಶೇಷ.