ಜಯನಗರ, ಬಸವನಹಳ್ಳಿ, ಕುವೆಂಪುನಗರ, ಕೋಟೆ, ರಾಮನಹಳ್ಳಿ, ಕೆಂಪನಹಳ್ಳಿ, ಕ್ರಿಶ್ಚಿಯನ್ ಕಾಲೋನಿ, ವಿಜಯಪುರ, ಗೌರಿ ಕಾಲುವೆ, ಕಾಳಿದಾಸನಗರ ಒಳಗೊಂಡಂತೆ ಬಹುತೇಕ ವಾರ್ಡ್ಗಳಲ್ಲಿ ಅಮೃತ್ ಯೋಜನೆ ಕಾಮಗಾರಿ ನಡೆಯುತ್ತಿದೆ. ಪೈಪ್ ಅಳವಡಿಸಲು ಗುಂಡಿ ಅಗೆದು, ಮುಚ್ಚಿದ ಮೇಲೆ ದೂಳಿನ ಅಬ್ಬರ ನಿತ್ಯ ಹೆಚ್ಚಾಗಿದೆ. ದೂಳಿನಿಂದಾಗಿ ನಿವಾಸಿಗಳು ಕೆಮ್ಮು, ನೆಗಡಿ, ಕಫ, ವಾಂತಿ, ಭೇದಿ, ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.