ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯ ಸ್ವಲ್ಪ ಅಂತರದಲ್ಲಿ ರಸ್ತೆಯ ಮಧ್ಯದಲ್ಲಿ ದೊಡ್ಡ ಗುಂಡಿ ಬಿದ್ದಿದೆ. ಈ ಹೆದ್ದಾರಿಯು ಆಲ್ದೂರು, ಮೂಡಿಗೆರೆ, ಕೊಟ್ಟಿಗೆಹಾರ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುತ್ತದೆ. ಮಳೆಗೆ ಗುಂಡಿಯಲ್ಲಿ ನೀರು ಸಂಗ್ರಹವಾಗಿ ಅವಘಡಕ್ಕೆ ದಾರಿ ಮಾಡುತ್ತಿದೆ. ಕೇವಲ 100 ಮೀಟರ್ ಅಂತರದಲ್ಲಿ ಜೆವಿಎಸ್ ಶಾಲೆ ಇದೆ. ಗುಂಡಿಯನ್ನು ಶೀಘ್ರವೇ ಮುಚ್ಚಬೇಕು ಎಂದು ಸ್ಥಳೀಯ ರಫೀಕ್, ವೆಂಕಟೇಶ್ ಕೆ, ವೇಲು, ಅದ್ರಾಮ, ಅಬ್ಬಾಸ್ ಒತ್ತಾಯಿಸಿದ್ದಾರೆ.