‘ನಕ್ಸಲ್ ಚಟುವಟಿಕೆ ಸಂಪೂರ್ಣ ನಿಗ್ರಹ ಆಗುವವರೆಗೆ ನಕ್ಸಲ್ ನಿಗ್ರಹ ಪಡೆ ವಿಭಾಗಗಳನ್ನು ವಾಪಸ್ ಪಡೆಯಲ್ಲ. ಅಂತರರಾಜ್ಯ ಮಟ್ಟದಲ್ಲಿ ನಕ್ಸಲ್ ಚಲನವಲನಗಳು ಇರುತ್ತವೆ. ಈ ರಾಜ್ಯದಲ್ಲಿ ಕ್ರಮ ವಹಿಸಿದರೆ ಬೇರೆ ರಾಜ್ಯಕ್ಕೆ ಹೋಗುತ್ತಾರೆ. ಎಲ್ಲವನ್ನು ಕಾದು ನೋಡುತ್ತಿದ್ದೇವೆ. ನಕ್ಸಲ್ ಚಟುವಟಿಕೆ ಬೆಂಬಲಿಸುವ ಮಾನಸಿಕತೆ ಇರುವವರ ಮೇಲೂ ಕಣ್ಣು ಇಟ್ಟಿದ್ದೇವೆ’ ಎಂದು ಹೇಳಿದರು.