ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಮಂದಗತಿಯಲ್ಲಿ ಸಾಗಿದೆ. ಅಡಿಕೆ ಕೊಯಿಲು ಮಾಡಲು ಅಡ್ಡಿಯಾಗಿದೆ. ಅರೇಬಿಕಾ ಕಾಫಿ ಹಣ್ಣಾಗಿ ಉದುರುತ್ತಿದೆ. ಬಲಿತ ಭತ್ತದ ಪೈರು ಕಟಾವು ಹಂತಕ್ಕೆ ತಲುಪಿದೆ, ಮಳೆಯಿಂದ ಅದು ಜಳ್ಳಾಗುವ ಭೀತಿ ಉಂಟಾಗಿದೆ. ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಕೃಷಿ ಕೆಲಸ ನೆಚ್ಚಿಕೊಂಡ ಕಾರ್ಮಿಕರು ಕೆಲಸವಿಲ್ಲದೇ ಸಮಸ್ಯೆ ಎದುರಿಸುತ್ತಿದ್ದಾರೆ.