ಚಿಕ್ಕಮಗಳೂರು: ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಮವಾರ ಮಳೆಯಾಯಿತು,ಇಳೆಗೆ ತಂಪೆರೆಯಿತು.
ಮಧ್ಯಾಹ್ನ 2.30ರ ಹೊತ್ತಿಗೆ ಮಳೆ ಶುರುವಾಯಿತು. ಮಿಂಚುಗುಡುಗಿನ ಆರ್ಭಟ ಇತ್ತು. ಆರಂಭದಲ್ಲಿ 10 ನಿಮಿಷ ಬಿರುಸಾಗಿ, ನಂತರ ನಿಧಾನಗತಿಯಲ್ಲಿ ಸುರಿಯಿತು. ಸುಮಾರು ಒಂದು ಗಂಟೆ ಸಾಧಾರಣ ಮಳೆಯಾಯಿತು.
ಅಲ್ಲಂಪುರ, ಗಿರಿಶ್ರೇಣಿ ಇತರೆಡೆಗಳಲ್ಲಿ ಮಳೆಯಾಗಿದೆ. ಮಳೆ ಶುರುವಾಗಿರುವುದು ರೈತರಲ್ಲಿ ಹರ್ಷ ಮೂಡಿಸಿದೆ.