ಅಂತರರಾಷ್ಟ್ರೀಯ ಮಟ್ಟದ ಜೂನಿಯರ್ ಪ್ಯಾರಾಲಂಪಿಕ್ಸ್ನ ಅಥ್ಲೆಟಿಕ್ಸ್ನಲ್ಲಿ ಕಳೆದ ಬಾರಿ 1500 ಮೀ. ಓಟದಲ್ಲಿ ಚಿನ್ನ ಪಡೆದು ಗಮನ ಸೆಳೆದಿದ್ದರು. ಇವರ ಈ ಸಾಧನೆಗೆ ಕ್ರಿಕೆಟ್ ತಾರೆ ವಿರಾಟ್ ಕೊಯ್ಲಿ ಫೌಂಡೇಷನ್ ವತಿಯಿಂದ ನೀಡುವ ‘ಭಾರತೀಯ ಕ್ರೀಡಾ ಪುರಸ್ಕಾರ’ವನ್ನು ಇದೇ 27ರಂದು ಮುಂಬೈನಲ್ಲಿ ನಡೆಯುವ ಸಮಾರಂಭದಲ್ಲಿ ವಿರಾಟ್ ಕೊಯ್ಲಿ ಅವರೇ ಪ್ರದಾನ ಮಾಡಲಿದ್ದಾರೆ ಎಂದು ಕೋಚ್ಗಳಾದ ರಾಹುಲ್, ಗೋವಿಂದ್ ಹಾಗೂ ಸೌಮ್ಯ ತಿಳಿಸಿದ್ದಾರೆ.