ಅಜ್ಜಂಪುರ: ‘ಗ್ರಾಮದೊಳಗಿನ ರಸ್ತೆ ಮತ್ತು ಗ್ರಾಮವನ್ನು ಹೋಬಳಿ, ತಾಲ್ಲೂಕು ಕೇಂದ್ರಕ್ಕೆ ಬೆಸೆಯುವ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ’ ಎಂದು ಶಾಸಕ ಡಿ.ಎಸ್. ಸುರೇಶ್ ಹೇಳಿದರು.
ತಾಲ್ಲೂಕಿನ ಮಾಳೇನಹಳ್ಳಿ ಗ್ರಾಮದಲ್ಲಿ ಗುರುವಾರ ₹ 25 ಲಕ್ಷ ವೆಚ್ಚದ 360 ಮೀ ಉದ್ದದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಅವರು ಮಾತನಾಡಿದರು.
ಮಾಳೇನಹಳ್ಳಿ- ಗೌರಾಪುರ ಸಂಪರ್ಕಿಸುವ ರಸ್ತೆ ತೀವ್ರ ಹದಗೆಟ್ಟಿದ್ದು, ರೈತರು ಹೊಲಗಳಿಂದ ತಮ್ಮ ಬೆಳೆ ತರಲು ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆ ರಸ್ತೆ ನಿರ್ಮಾಣಕ್ಕೆ ₹25 ಲಕ್ಷ ನೀಡುವಂತೆ ಪ್ರಸ್ತಾವ ಸಲ್ಲಿಸಿದ್ದು, ಶೀಘ್ರದಲ್ಲಿಯೇ ಹಣ ಮಂಜೂರಾಗಲಿದೆ ಎಂದರು.
ಸಮುದಾಯ ಭವನ ಪೂರ್ಣಗೊಳಿಸಲು ₹ 5 ಲಕ್ಷ ಅನುದಾನ ನೀಡಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಂಬೈನೂರು ಆನಂದಪ್ಪ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಗರಗದಹಳ್ಳಿ ಪ್ರತಾಪ್, ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷೆ ಪ್ರೇಮ ಮಂಜುನಾಥ್ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಂಕರಮ್ಮ, ಮಾಜಿ ಅಧ್ಯಕ್ಷ ನಿಜಗುಣಸ್ವಾಮಿ, ಉಪಾಧ್ಯಕ್ಷೆ ಸರೋಜಮ್ಮ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್, ಎ.ಇ.ಇ ಅಶ್ವಿನಿ, ಜೆಇ ಪುನೀತ್, ಮುಖಂಡ ಮಂಜುನಾಥ್, ಸೊಲ್ಲಾಪುರ ಸ್ವಾಮಿ, ವಿಎಸ್ಎಸ್ಎನ್ ಅಧ್ಯಕ್ಷ ದೇವರಾಜ, ಶಿವರಾಜು, ಪ್ರೇಮಾ ಮಂಜುನಾಥ್ ಇದ್ದರು.