‘5ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳು ಮುಂದಿನ ಹಂತದ ಕಲಿಕೆಗೆ ಚನ್ನಾಪುರ ಇಲ್ಲವೇ ಬಗ್ಗವಳ್ಳಿ ಅಥವಾ ಅಜ್ಜಂಪುರಕ್ಕೆ ಹೋಗಬೇಕಿದೆ. ಪಡಿತರ ಪಡೆಯಲು ಬಗ್ಗವಳ್ಳಿಗೆ, ಚಿಕಿತ್ಸೆಗೆ ಅಜ್ಜಂಪುರ, ಬೀರೂರು, ತರೀಕೆರೆಗೆ ಹೋಗಬೇಕಿದೆ. ಆದರೆ, ಹದಗೆಟ್ಟ ಸಂಪರ್ಕ ರಸ್ತೆಯಿಂದಾಗಿ ಬಾಡಿಗೆ ವಾಹನದವರು ಗ್ರಾಮಕ್ಕೆ ಬರಲು ಹಿಂಜರಿಯುತ್ತಾರೆ. ಕೆಲವೊಮ್ಮೆ ಕಾಯಿಲೆಯಿದ್ದರೂ ನಡೆದೆ ಮುಖ್ಯ ರಸ್ತೆ ತಲುಪುವ ಅನಿವಾರ್ಯತೆ ಇದೆ’ ಎನ್ನುತ್ತಾರೆ ನಿವಾಸಿ ಶಿವು.