<p><strong>ಕಡೂರು</strong>: ತಾಲ್ಲೂಕಿನ ತಂಗಲಿ ಕ್ರಾಸ್ ಬಳಿಯಿಂದ ಬೀರೂರುವರೆಗೆ 11.8 ಕಿ.ಮೀ. ಉದ್ದದ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಬುಧವಾರ ಚಾಲನೆ ನೀಡಿದರು. ₹5.90 ಕೋಟಿ ವೆಚ್ಚದಲ್ಲಿ ರಸ್ತೆ ಮರು ಡಾಂಬರೀಕರಣಗೊಳ್ಳಲಿದೆ. </p>.<p>‘ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಕಾಮಗಾರಿ ಪ್ರಗತಿಯಲ್ಲಿದೆ. ಕಡೂರು ಮತ್ತು ಬೀರೂರು ಪಟ್ಟಣಗಳನ್ನು ಹಾದು ಹೋಗಿರುವ ಈ ರಸ್ತೆ ಅಭಿವೃದ್ಧಿ ಕಳೆದ ಆರು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ರಸ್ತೆಯನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲು ವಿಳಂಬವಾಗಿತ್ತು. ಇದೀಗ ಆ ತೊಂದರೆ ಪರಿಹಾರವಾಗಿ ರಸ್ತೆ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರವಾಗಿದೆ. ಮೊದಲ 2 ಕಿ.ಮೀ.ವರೆಗೆ ಎರಡು ಪದರ ಮತ್ತು ಅಲ್ಲಿಂದ ಮುಂದಕ್ಕೆ ಒಂದು ಪದರ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಈ ರಸ್ತೆ 7 ಮೀಟರ್ ಅಗಲ ಇರುತ್ತದೆ. ಮುಂಬರುವ ದಿನಗಳಲ್ಲಿ ಈ ರಸ್ತೆಯನ್ನು 10 ಮೀಟರ್ನಷ್ಟು ಅಗಲೀಕರಣಗೊಳಿಸಲಾಗುವುದು. ವೇದಾ ನದಿ ಸೇತುವೆ ಬಗ್ಗೆಯೂ ಗಮನ ಹರಿಸಲಾಗುವುದು. ಕಡೂರು ಮತ್ತು ಬೀರೂರು ಪಟ್ಟಣಗಳ ವಾಣಿಜ್ಯ ಅಭಿವೃದ್ಧಿ ದೃಷ್ಟಿಯಿಂದ ಈ ರಸ್ತೆ ನಿರ್ಮಾಣ ಮಹತ್ವದ್ದಾಗಿದೆ’ ಎಂದು ಆನಂದ್ ಹೇಳಿದರು.</p>.<p>ಲೋಕೋಪಯೋಗಿ ಇಲಾಖೆಯ ಎಇಇ ಬಸವರಾಜ ನಾಯ್ಕ ಮಾತನಾಡಿ, ‘ಈ ರಸ್ತೆ ಕಾಮಗಾರಿಯನ್ನು ಒಂದು ತಿಂಗಳೊಳಗಾಗಿ ಪೂರ್ಣಗೊಳಿಸಲಾಗುವುದು’ ಎಂದರು.</p>.<p>ತಂಗಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್, ಮುಖಂಡರಾದ ನಾರಾಯಣ ನಾಯ್ಕ, ಗೋವಿಂದಪ್ಪ, ಪಾಂಡಣ್ಣ, ಶ್ರೀನಿವಾಸ್ ನಾಯ್ಕ,ಪ್ಯಾರೇಜಾನ್ ಇದ್ದರು.</p>.<p>ಕಡೂರು ಪಟ್ಟಣದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206ರ ಬೈಪಾಸ್ ಕಾಮಗಾರಿ ಪ್ರಗತಿಯಲ್ಲಿದ್ದು, ಕಡೂರು ಪಟ್ಟಣದೊಳಗೆ ಹಾದು ಹೋಗುವ ರಸ್ತೆಯನ್ನು ಉಪೇಕ್ಷಿಸಲಾಗಿತ್ತು. ರಸ್ತೆಯುದ್ದಕ್ಕೂ ಗುಂಡಿಗಳಾಗಿ ಸಂಚಾರ ದುಸ್ತರವಾಗಿತ್ತು. ಈ ಕುರಿತು ಪ್ರಜಾವಾಣಿಯಲ್ಲಿ ವರದಿ ಪ್ರಕಟವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡೂರು</strong>: ತಾಲ್ಲೂಕಿನ ತಂಗಲಿ ಕ್ರಾಸ್ ಬಳಿಯಿಂದ ಬೀರೂರುವರೆಗೆ 11.8 ಕಿ.ಮೀ. ಉದ್ದದ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಬುಧವಾರ ಚಾಲನೆ ನೀಡಿದರು. ₹5.90 ಕೋಟಿ ವೆಚ್ಚದಲ್ಲಿ ರಸ್ತೆ ಮರು ಡಾಂಬರೀಕರಣಗೊಳ್ಳಲಿದೆ. </p>.<p>‘ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಕಾಮಗಾರಿ ಪ್ರಗತಿಯಲ್ಲಿದೆ. ಕಡೂರು ಮತ್ತು ಬೀರೂರು ಪಟ್ಟಣಗಳನ್ನು ಹಾದು ಹೋಗಿರುವ ಈ ರಸ್ತೆ ಅಭಿವೃದ್ಧಿ ಕಳೆದ ಆರು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ರಸ್ತೆಯನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲು ವಿಳಂಬವಾಗಿತ್ತು. ಇದೀಗ ಆ ತೊಂದರೆ ಪರಿಹಾರವಾಗಿ ರಸ್ತೆ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರವಾಗಿದೆ. ಮೊದಲ 2 ಕಿ.ಮೀ.ವರೆಗೆ ಎರಡು ಪದರ ಮತ್ತು ಅಲ್ಲಿಂದ ಮುಂದಕ್ಕೆ ಒಂದು ಪದರ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಈ ರಸ್ತೆ 7 ಮೀಟರ್ ಅಗಲ ಇರುತ್ತದೆ. ಮುಂಬರುವ ದಿನಗಳಲ್ಲಿ ಈ ರಸ್ತೆಯನ್ನು 10 ಮೀಟರ್ನಷ್ಟು ಅಗಲೀಕರಣಗೊಳಿಸಲಾಗುವುದು. ವೇದಾ ನದಿ ಸೇತುವೆ ಬಗ್ಗೆಯೂ ಗಮನ ಹರಿಸಲಾಗುವುದು. ಕಡೂರು ಮತ್ತು ಬೀರೂರು ಪಟ್ಟಣಗಳ ವಾಣಿಜ್ಯ ಅಭಿವೃದ್ಧಿ ದೃಷ್ಟಿಯಿಂದ ಈ ರಸ್ತೆ ನಿರ್ಮಾಣ ಮಹತ್ವದ್ದಾಗಿದೆ’ ಎಂದು ಆನಂದ್ ಹೇಳಿದರು.</p>.<p>ಲೋಕೋಪಯೋಗಿ ಇಲಾಖೆಯ ಎಇಇ ಬಸವರಾಜ ನಾಯ್ಕ ಮಾತನಾಡಿ, ‘ಈ ರಸ್ತೆ ಕಾಮಗಾರಿಯನ್ನು ಒಂದು ತಿಂಗಳೊಳಗಾಗಿ ಪೂರ್ಣಗೊಳಿಸಲಾಗುವುದು’ ಎಂದರು.</p>.<p>ತಂಗಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್, ಮುಖಂಡರಾದ ನಾರಾಯಣ ನಾಯ್ಕ, ಗೋವಿಂದಪ್ಪ, ಪಾಂಡಣ್ಣ, ಶ್ರೀನಿವಾಸ್ ನಾಯ್ಕ,ಪ್ಯಾರೇಜಾನ್ ಇದ್ದರು.</p>.<p>ಕಡೂರು ಪಟ್ಟಣದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206ರ ಬೈಪಾಸ್ ಕಾಮಗಾರಿ ಪ್ರಗತಿಯಲ್ಲಿದ್ದು, ಕಡೂರು ಪಟ್ಟಣದೊಳಗೆ ಹಾದು ಹೋಗುವ ರಸ್ತೆಯನ್ನು ಉಪೇಕ್ಷಿಸಲಾಗಿತ್ತು. ರಸ್ತೆಯುದ್ದಕ್ಕೂ ಗುಂಡಿಗಳಾಗಿ ಸಂಚಾರ ದುಸ್ತರವಾಗಿತ್ತು. ಈ ಕುರಿತು ಪ್ರಜಾವಾಣಿಯಲ್ಲಿ ವರದಿ ಪ್ರಕಟವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>