ರಾಜಕೀಯ ಪಕ್ಷಗಳಲ್ಲಿ ಈ ಗ್ರಾಮದ ಯಾವ ವ್ಯಕ್ತಿಯೂ ಸಕ್ರಿಯವಾಗಿಲ್ಲ. ಅದೇ ಕಾರಣಕ್ಕೆ ನಮ್ಮ ಊರಿಗೆ ರಸ್ತೆ ಆಗುತ್ತಿಲ್ಲ ಎಂಬ ನಂಬಿಕೆ ಹಳ್ಳಿಗರಲ್ಲಿ ಇದೆ. ಮನೆಗಳಿಗೆ ದಿನಸಿ, ವಿದ್ಯಾರ್ಥಿಗಳಿಗೆ ಶಾಲೆ, ರೋಗಿಗಳಿಗೆ ಆಸ್ಪತ್ರೆ ಕಾರಣಕ್ಕೆ ಮುಜೇಕಾನು ಜನರಿಗೆ ಕಳಸದ ಭೇಟಿ ಅನಿವಾರ್ಯ. ಆದರೆ, ರಸ್ತೆ ಅನುದಾನ ಮತ್ತು ದುರಸ್ತಿ ಬಗೆಗಿನ ಲೆಕ್ಕಾಚಾರದಲ್ಲಿ ಮಾತ್ರ ಅವರು ಅತ್ಯಂತ ಅಮಾಯಕರಾಗಿ ಕಾಣುತ್ತಾರೆ.