ಕಳಸ: ಹೊಸೂರು ಗ್ರಾಮಕ್ಕೆ ತೆರಳುವ ಕಚ್ಚಾ ರಸ್ತೆಯನ್ನು ಗ್ರಾಮಸ್ಥರೇ ದುರಸ್ತಿ ಮಾಡಿದ್ದಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ಈ ರಸ್ತೆಯು ಭೂಕುಸಿತದಿಂದ ಹದಗೆಡುತ್ತಿದೆ.
‘ಪ್ರತಿವರ್ಷವೂ ಮಳೆಗಾಲ ಕಳೆದ ನಂತರ ಈ ರಸ್ತೆಯ ದುರಸ್ತಿ ಮಾಡಲೇ ಬೇಕಿದೆ. ಇಲ್ಲದಿದ್ದರೆ ತೋಟಕ್ಕೆ ಗೊಬ್ಬರ ಕೊಂಡೊಯ್ಯಲು ಅಥವಾ ತೋಟದಿಂದ ಫಸಲು ತರಲು ರಸ್ತೆಯೇ ಇಲ್ಲವಾಗುತ್ತದೆ’ ಎಂದು ಗ್ರಾಮಸ್ಥ ಅಶೋಕ್ ಹೇಳುತ್ತಾರೆ.