‘ಕಳೆದ ಬೇಸಿಗೆಯಲ್ಲಿ ಶಾಲೆಯ ಚಾವಣಿ ದುರಸ್ತಿ ಮಾಡಬೇಕಿತ್ತು. ಆದರೆ, ಮಾಡಿಲ್ಲ. ಹೀಗಾಗಿ ಈ ಮಳೆಗಾಲದಲ್ಲಿ ಚಾವಣಿ ಕುಸಿಯುವ ಸಾಧ್ಯತೆ ಇದೆ. ವಿದ್ಯುತ್ ಸಂಪರ್ಕ ಇದೆ, ಆದರೆ, ಮಳೆ ನೀರು ಸೋರುತ್ತಿರುವುದರಿಂದ ಸ್ವಿಚ್ ಮುಟ್ಟಿದವರಿಗೆ ಶಾಕ್ ಹೊಡೆಯುತ್ತದೆ. ಶಾಲೆಗೆ ಒಬ್ಬ ಅತಿಥಿ ಶಿಕ್ಷಕರನ್ನು ಮಾತ್ರ ಕೊಟ್ಟಿದ್ದಾರೆ. ಆದರೆ, ಶಾಲೆಗೆ ಹೆಚ್ಚುವರಿ ಶಿಕ್ಷಕರು ಬೇಕು' ಎಂದು ಪೋಷಕ ಕೇಶವ ಆಚಾರ್ ಶಾಲೆಯ ಸಮಸ್ಯೆಗಳನ್ನು ಪಟ್ಟಿ ಮಾಡುತ್ತಾರೆ.