‘ತೋಟದ ಪಕ್ಕ ಹಳ್ಳ ಹಾದುಹೋಗಿರುವ ಜಾಗದಲ್ಲಿ ಮಂಜಯ್ಯ ಅವರು ಸೋಮವಾರ ಮಧ್ಯಾಹ್ನ ಹೊಂಡದಿಂದ ಜೆಸಿಬಿಯಲ್ಲಿ ಮಣ್ಣು ತೆಗೆಸುವಾಗ ಲಕ್ಷ್ಮಣ ತಗಾದೆ ತೆಗೆದು ಇಬ್ಬರಿಗೂ ವಾಗ್ವಾದ ನಡೆದಿದೆ. ಮನೆಗೆ ಬಂದ ಲಕ್ಷ್ಮಣ ತೋಟದಿಂದ ತಮ್ಮ ಬರುವುದನ್ನು ಕಾದಿದ್ದು, ರಾತ್ರಿ 9.30ರ ಸುಮಾರಿಗೆ ದಾರಿಯಲ್ಲಿ ಆತ ಬರುವಾಗ ನೋಡಿ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.