ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ತ್ರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಸಗೋಡು ಗ್ರಾಮದ ತೋಟದಲ್ಲಿ ಗುಂಡು (ಚೆರ್ರಿ) ತಗುಲಿ ಲಕ್ಷ್ಮಣಗೌಡ(50) ಮೃತಪಟ್ಟಿದ್ದಾರೆ.
ಲಕ್ಷ್ಮಣಗೌಡ ಶುಕ್ರವಾರ ರಾತ್ರಿ ತೋಟಕ್ಕೆ ಪಹರೆ ಹೋಗಿದ್ದರು. ಕೋವಿ ಒಯ್ದಿದ್ದರು. ಬೆಳಿಗ್ಗೆಯಾದರೂ ವಾಪಸಾಗದ್ದರಿಂದ ಮನೆಯವರು ತೋಟದಲ್ಲಿ ಹುಡುಕಾಡಿದಾಗ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಲೆಯ ಬಲಭಾಗ ಮತ್ತು ಎದೆಭಾಗದಲ್ಲಿ ಗುಂಡು (ಚೆರ್ರಿ) ಹೊಕ್ಕಿರುವ ಗುರುತುಗಳು ಇವೆ. ರಕ್ತ ಹೊಮ್ಮಿದೆ. ಸಾವು ಅನುಮಾನಸ್ಪದವಾಗಿದ್ದು, ತನಿಖೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಮೂಡಿಗೆರೆ ಮತ್ತು ಬಣಕಲ್ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಪ್ರಕರಣದ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಮೂಡಿಗೆರೆ ಆಸ್ಪತ್ರೆಗೆ ಒಯ್ಯಲಾಗಿದೆ.