ಚಿಕ್ಕಮಗಳೂರು: ಶ್ರೀರಾಮ ಸೇನೆ ದತ್ತಮಾಲಾ ಅಭಿಯಾನದ ಕೊನೆ ದಿನ ಭಾನುವಾರ ದತ್ತ ಭಕ್ತರು, ಮಾಲಾಧಾರಿಗಳು ಗಿರಿಯಲ್ಲಿ ಶ್ರೀಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ದತ್ತ ಪಾದುಕೆ ದರ್ಶನ ಮಾಡಿ ಭಕ್ತಿ ಸಮರ್ಪಿಸಿದರು.
ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ಮೊದಲಾದರು ಪಾದುಕೆ ದರ್ಶನ ಮಾಡಿ ನಮಿಸಿದರು.
ದರ್ಗಾ ಆವರಣ ಸಮೀಪದ ಪ್ರದೇಶದಲ್ಲಿನ ಸಭಾಮಂಟಪದಲ್ಲಿ ಹೋಮ ಕೈಂಕರ್ಯಗಳು ನೆರವೇರಿದವು. ಅಭಿಯಾನದ ನಿಮಿತ್ತ ನಗರ, ಮತ್ತು ಗಿರಿಶ್ರೇಣಿ ಮಾರ್ಗ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.