ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ತುಂಗಾ ನದಿಗೆ ಕಲ್ಪೋಕ್ತ ಪೂಜೆ ನೆರವೇರಿದ ಬಳಿಕ, ತುಂಗಾ ಕಲಶವನ್ನು ಉತ್ಸವದ ಮೂಲಕ ತರಲಾಯಿತು. ಮಠದ ಒಳಾಂಗಣದಲ್ಲಿ ಮಠದ ಆನೆಗಳು, ವಾದ್ಯಗೋಷ್ಠಿಗಳೊಂದಿಗೆ ಉತ್ಸವ ನಡೆಯಿತು. ಬಳಿಕ ಶಾರದಾಂಬೆ, ಶಂಕರ ಭಗವತ್ಪಾದ ಹಾಗೂ ವಿದ್ಯಾಶಂಕರ ದೇಗುಲದ ಸನ್ನಿಧಿಯಲ್ಲಿ ಅಭಿಷೇಕ ಹಾಗೂ ವಿಶೇಷಪೂಜೆ ನೆರವೇರಿತು.