ಚಿಕ್ಕಮಗಳೂರು: ಗೃಹ ಮಂಡಳಿ ಬಡಾವಣೆಯ ಕಾಫಿ ಮಂಡಳಿ ಕಚೇರಿ ಬಳಿಯ ಕೊಟ್ಟಿಗೆಯೊಂದಕ್ಕೆ ಗುರುವಾರ ಬೆಳಿಗ್ಗೆ ಹೆಬ್ಬಾವು ನುಗ್ಗಿ ಮೇಕೆ ಮರಿಯನ್ನು ನುಂಗಿದೆ.
ವೆಂಕಟಪ್ಪ ಎಂಬವರ ಮೇಕೆ ಶೆಡ್ಗೆ ಬೆಳಿಗ್ಗೆ 8.30ರ ಹೊತ್ತಿನಲ್ಲಿ ಹಾವು ನುಗ್ಗಿದೆ. ಹಾವು ಒಳಕ್ಕೆ ಹೋಗಿದ್ದನ್ನು ವೆಂಕಟಪ್ಪ ನೋಡಿದ್ದಾರೆ. ತಕ್ಷಣವೇ ಸ್ಥಳೀಯರು ಉರಗ ಪ್ರೇಮಿ ಸ್ನೇಕ್ ನರೇಶ್ ವಿಷಯ ಮುಟಿಸಿದ್ದಾರೆ. ಹಾವನ್ನು ನೋಡಲು ಶೆಡ್ ಬಳಿ ಸುತ್ತಮುತ್ತಲಿನ ಭಾಗದ ಜನರು ಸೇರಿದ್ದರು.
‘ಮೇಕೆಮರಿಯನ್ನು ಹೆಬ್ಬಾವು ನುಂಗಿದ್ದನ್ನು ನೋಡಿದ್ದಾಗಿ ಮಾಲೀಕ ತಿಳಿಸಿದರು. ಹಾವು ಸುಮಾರು 12 ಅಡಿ ಉದ್ದ ಇತ್ತು. ಮೇಕೆ ನುಂಗಿದ್ದರಿಂದ ವಿಪರೀತ ಭಾರ ಇತ್ತು’ ಎಂದು ಸ್ನೇಕ ನರೇಶ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಹೆಬ್ಬಾವನ್ನು ಹಿಡಿದು ಚೀಲಕ್ಕೆ ತುಂಬಿಕೊಂಡೆವು. ಅರಣ್ಯಕ್ಕೆ ಒಯ್ದು ಬಿಟ್ಟೆವು’ ಎಂದರು.