<p><strong>ಕಳಸ/ಶೃಂಗೇರಿ:</strong> ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮತ್ತು ಹೊರನಾಡು ದೇಗುಲಗಳು ಅನ್ನ ದಾಸೋಹಕ್ಕೆ ಅಡುಗೆ ಅನಿಲದ ಮೇಲೆ ಅವಲಂಬಿತವಾಗಿಲ್ಲ.</p>.<p>ಎಲ್ಲೆಡೆ ಅಡುಗೆ ಅನಿಲದ ಸಮಸ್ಯೆ ಕಾಡುತ್ತಿದ್ದರೆ, ಈ ಎರಡೂ ದೇಗುಲಗಳಲ್ಲಿ ಅನ್ನದಾಸೋಹಕ್ಕೆ ಅಡುಗೆ ಅನಿಲದ ಸಮಸ್ಯೆ ಕಾಡಿಲ್ಲ. ಎರಡೂ ಕಡೆ ಉರುವಲಾಗಿ ಸೌದೆ ಹೊಟ್ಟು, ಕಾಫಿ ಪೆಲೆಟ್ಸ್ ಬಳಕೆ ಆಗುತ್ತಿದೆ. </p>.<p>ಶೃಂಗೇರಿಯ ಶಾರದಾ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಪ್ರತಿನಿತ್ಯ ಊಟದ ವ್ಯವಸ್ಥೆ ಇದೆ. ಸುಮಾರು 8 ಸಾವಿರ ಜನರಿಗೆ ನಿತ್ಯ ದಾಸೋಹ ನಡೆಯಲಿದೆ. ಮರದ ಹೊಟ್ಟು ಮತ್ತು ಪುಡಿ ಸೌದೆಯ ಒಂದು ಬಾಯ್ಲರ್, ಮತ್ತೊಂದು ಡೀಸೆಲ್ ಬಾಯ್ಲರ್ ಇದೆ. ಇವೆರಡನ್ನೂ ಬಳಸಿ ಊಟ ತಯಾರಿಸಲಾಗುತ್ತಿದೆ. ಮೊದಲಿನಿಂದಲೂ ಅಡುಗೆ ಅನಿಲ ಬಳಕೆಯ ಪ್ರಯತ್ನವನ್ನೇ ಇಲ್ಲಿ ಮಾಡಿಲ್ಲ.</p>.<p>ಮತ್ತೊಂದೆಡೆ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲೂ ಅಡುಗೆ ಅನಿಲದ ಮೇಲೆ ಅವಲಂಬನೆಯಾಗಿಲ್ಲ. ಕಾಫಿ ಸಿಪ್ಪೆಯ ಪೆಲೆಟ್ಸ್ಗಳನ್ನು ಬಳಸಿ ಅಡುಗೆ ತಯಾರಿಸಲಾಗುತ್ತಿದೆ.</p>.<p>‘ಕಾಫಿ ಸಿಪ್ಪೆಯಿಂದ ಪೆಲೆಟ್ಸ್(ಸಿಪ್ಪೆಯಿಂದ ಮಾಡಿದ ಸಣ್ಣ ಉಂಟೆಗಳು) ತಯಾರಿಸಲಾಗುತ್ತದೆ. ಅವುಗಳನ್ನು ಉರುವಲಿಗೆ ಬಳಸಲಾಗುತ್ತದೆ. ಪೆಲೆಟ್ಸ್ನಿಂದ ಸ್ಟೀಮ್ ಉತ್ಪಾದಿಸುವ ಬಾಯ್ಲರ್ ಯಂತ್ರವನ್ನು ಅಳವಡಿಸಲಾಗಿದೆ. ಹೀಗಾಗಿ, ಸಮಸ್ಯೆ ತಟ್ಟಿಲ್ಲ’ ಎಂದು ದೇಗುಲದವರು ಹೇಳುತ್ತಾರೆ.</p>.<p>ಹೊರನಾಡಿನಲ್ಲಿ ಪ್ರತಿನಿತ್ಯ 5 ಸಾವಿರ ಜನರಿಗೆ ಅಡುಗೆ ತಯಾರಿಸಲಾಗುತ್ತಿದೆ. ಪರೀಕ್ಷಾ ಸಮಯ ಆಗಿರುವುದರಿಂದ ಪ್ರವಾಸಿಗರ ಸಂಖ್ಯೆ ಎರಡೂ ದೇಗುಲಗಳಿಗೆ ಕಡಿಮೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಳಸ/ಶೃಂಗೇರಿ:</strong> ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮತ್ತು ಹೊರನಾಡು ದೇಗುಲಗಳು ಅನ್ನ ದಾಸೋಹಕ್ಕೆ ಅಡುಗೆ ಅನಿಲದ ಮೇಲೆ ಅವಲಂಬಿತವಾಗಿಲ್ಲ.</p>.<p>ಎಲ್ಲೆಡೆ ಅಡುಗೆ ಅನಿಲದ ಸಮಸ್ಯೆ ಕಾಡುತ್ತಿದ್ದರೆ, ಈ ಎರಡೂ ದೇಗುಲಗಳಲ್ಲಿ ಅನ್ನದಾಸೋಹಕ್ಕೆ ಅಡುಗೆ ಅನಿಲದ ಸಮಸ್ಯೆ ಕಾಡಿಲ್ಲ. ಎರಡೂ ಕಡೆ ಉರುವಲಾಗಿ ಸೌದೆ ಹೊಟ್ಟು, ಕಾಫಿ ಪೆಲೆಟ್ಸ್ ಬಳಕೆ ಆಗುತ್ತಿದೆ. </p>.<p>ಶೃಂಗೇರಿಯ ಶಾರದಾ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಪ್ರತಿನಿತ್ಯ ಊಟದ ವ್ಯವಸ್ಥೆ ಇದೆ. ಸುಮಾರು 8 ಸಾವಿರ ಜನರಿಗೆ ನಿತ್ಯ ದಾಸೋಹ ನಡೆಯಲಿದೆ. ಮರದ ಹೊಟ್ಟು ಮತ್ತು ಪುಡಿ ಸೌದೆಯ ಒಂದು ಬಾಯ್ಲರ್, ಮತ್ತೊಂದು ಡೀಸೆಲ್ ಬಾಯ್ಲರ್ ಇದೆ. ಇವೆರಡನ್ನೂ ಬಳಸಿ ಊಟ ತಯಾರಿಸಲಾಗುತ್ತಿದೆ. ಮೊದಲಿನಿಂದಲೂ ಅಡುಗೆ ಅನಿಲ ಬಳಕೆಯ ಪ್ರಯತ್ನವನ್ನೇ ಇಲ್ಲಿ ಮಾಡಿಲ್ಲ.</p>.<p>ಮತ್ತೊಂದೆಡೆ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲೂ ಅಡುಗೆ ಅನಿಲದ ಮೇಲೆ ಅವಲಂಬನೆಯಾಗಿಲ್ಲ. ಕಾಫಿ ಸಿಪ್ಪೆಯ ಪೆಲೆಟ್ಸ್ಗಳನ್ನು ಬಳಸಿ ಅಡುಗೆ ತಯಾರಿಸಲಾಗುತ್ತಿದೆ.</p>.<p>‘ಕಾಫಿ ಸಿಪ್ಪೆಯಿಂದ ಪೆಲೆಟ್ಸ್(ಸಿಪ್ಪೆಯಿಂದ ಮಾಡಿದ ಸಣ್ಣ ಉಂಟೆಗಳು) ತಯಾರಿಸಲಾಗುತ್ತದೆ. ಅವುಗಳನ್ನು ಉರುವಲಿಗೆ ಬಳಸಲಾಗುತ್ತದೆ. ಪೆಲೆಟ್ಸ್ನಿಂದ ಸ್ಟೀಮ್ ಉತ್ಪಾದಿಸುವ ಬಾಯ್ಲರ್ ಯಂತ್ರವನ್ನು ಅಳವಡಿಸಲಾಗಿದೆ. ಹೀಗಾಗಿ, ಸಮಸ್ಯೆ ತಟ್ಟಿಲ್ಲ’ ಎಂದು ದೇಗುಲದವರು ಹೇಳುತ್ತಾರೆ.</p>.<p>ಹೊರನಾಡಿನಲ್ಲಿ ಪ್ರತಿನಿತ್ಯ 5 ಸಾವಿರ ಜನರಿಗೆ ಅಡುಗೆ ತಯಾರಿಸಲಾಗುತ್ತಿದೆ. ಪರೀಕ್ಷಾ ಸಮಯ ಆಗಿರುವುದರಿಂದ ಪ್ರವಾಸಿಗರ ಸಂಖ್ಯೆ ಎರಡೂ ದೇಗುಲಗಳಿಗೆ ಕಡಿಮೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>