‘ಒಂದು ಬಾರಿಗೆ 20 ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ಅವರು ಹೊರಗೆ ಬಂದ ಬಳಿಕ ಮತ್ತೆ 20 ಜನರು ಒಳಗೆ ಪ್ರವೇಶಿಸಬಹುದು. ಶಾರದಾ ಮಠದ ಮುಂಭಾಗದ ಗೇಟ್ನಲ್ಲಿ ಕಂಪ್ಯೂಟರ್ ತಂತ್ರಜ್ಞರಿಗೆ ಭಕ್ತರು ತಮ್ಮ ಮಾಹಿತಿಯನ್ನು ನೀಡಬೇಕು ಮತ್ತು ಹೊರಬರಲು ಮತ್ತೊಂದು ಗೇಟ್ ತೆರೆಯಲಾಗುತ್ತದೆ. ನರಸಿಂಹವನದ ಗುರುನಿವಾಸದಲ್ಲಿ ಉಭಯ ಗುರುಗಳ ದರ್ಶನಕ್ಕೆ ಅವಕಾಶವಿದೆ. ಬೆಳಿಗ್ಗೆ 10 ಗಂಟೆಯಿಂದ 12ರ ತನಕ ಹಾಗೂ ಸಂಜೆ 5ರಿಂದ 6 ಗಂಟೆಯ ತನಕ ಮಾತ್ರ, ಗುರುಗಳು ಭಕ್ತರಿಗೆ ದರ್ಶನ ನೀಡಲಿದ್ದಾರೆ. ಗುರುಗಳ ದರ್ಶನ ಪಡೆಯುವರು ವಿದ್ಯಾತೀರ್ಥ ಸೇತುವೆ ದಾಟಿ ಹೋಗಬೇಕು. ಆರು ಅಡಿ ಅಂತರದಲ್ಲಿ ಗುರುಗಳ ಅನುಗ್ರಹ ಪಡೆಯಬಹುದು’ ಎಂದು ಹೇಳಿದ್ದಾರೆ.