ಗಾಯತ್ರಿ ಸಂಬಂಧಿಕರಾದ ರಮೇಶ ನಾಯ್ಕ, ಮಂಜಾನಾಯ್ಕ, ಚೇತನಕುಮಾರ್ ನಾಯ್ಕ ಅವರು ಅಜ್ಜನ ಮನೆಗೆ ಹೋಗದಂತೆ ಗಾಯತ್ರಿಗೆ ತಾಕೀತು ಮಾಡಿದ್ದರು. ನಿಂದಿಸಿದ್ದರು, ಚಪ್ಪಲಿಯಿಂದ ಹೊಡೆದು ಗಾಯಗೊಳಿಸಿದ್ದರು. ಇನ್ನೊಮ್ಮೆ ಮನೆಗೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.