ಚಿಕ್ಕಮಗಳೂರು: ನಗರದ ಹೊಸಮನೆ ಬಡಾವಣೆಯಲ್ಲಿ ವೃದ್ಧ ದಂಪತಿ ಶನಿವಾರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತಿ ಗೋಪಾಲಕೃಷ್ಣ(78) ಗೋಪಾಲ ಕೃಷ್ಣ ನೇಣು ಹಾಕಿಕೊಂಡು ಮತ್ತು ಪತ್ನಿ ರತ್ನಮ್ಮ (73) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶವದ ಬಳಿ ಡೆತ್ ನೋಟ್ವೊಂದು ಸಿಕ್ಕಿದೆ.
ದಂಪತಿಗೆ ಇಬ್ಬರು ಪುತ್ರರು ಇದ್ದಾರೆ. ಒಬ್ಬರು ಚಿಕ್ಕಮಗಳೂರಿನಲ್ಲಿ ಮತ್ತು ಬೆಂಗಳೂರಿನಲ್ಲಿ ಇದ್ದಾರೆ.
‘ನಮ್ಮ ಸಾವಿಗೆ ನಾವೇ ಕಾರಣ. ವೃದ್ಧಾಪ್ಯದ ಸಮಸ್ಯೆ, ಪತ್ನಿ ಕಾಲಿಗೆ ಶಸ್ತ್ರಚಿಕಿತ್ಸೆ ಆಗಿ ಓಡಾಟಕ್ಕೆ ತೊಂದರೆ, ಪಾಲನೆ ಮಾಡುವವರು ಇಲ್ಲ. ಹೀಗಾಗಿ, ಈ ಆತ್ಮಹತ್ಯೆ ಮಾಡಿಕೊಂಡಿದ್ದೇವೆ ಎಂದು ಪತ್ರದಲ್ಲಿ ಬರೆದಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.