ನಂತರ ಮಾತನಾಡಿದ ವೇದಿಕೆಯ ಅಧ್ಯಕ್ಷ ರಾಜೇಶ್ ದ್ಯಾವಂಟು ಮಾತನಾಡಿ, ಅನನ್ಯ ಸಾಹಿತಿ ತೇಜಸ್ವಿ ಅವರ ಜಾತಿಗೆ ಹೊಂದಿಕೊಂಡ ಮಾಂಸದ ಆಹಾರವನ್ನು ಜೋಡಿಸಿ ಅವಹೇಳನೆ ಮಾಡಲಾಗಿದೆ. ಭಾನುವಾರದ ಬಾಡೂಟ, ಕಾಫಿ ತೋಟದಲ್ಲಿ ಕಾಡುಕೋಳಿ, ಮಲೆನಾಡಿನ ಮಟನ್ ವೈರೈಟಿಗಳು, ಉಡದ ಮಾಂಸದ ಚಿದಂಬರ ರಹಸ್ಯ, ಅಲೆಮಾರಿಯ ಆಡುಗಳು, ಕಾಡೆಮ್ಮೆ ಕೊಂದುಂಡ ಕಥೆಗಳು, ನಿಗೂಢ ರೆಸಿಪಿಗಳ ನಿಗೂಢ ಮನುಷ್ಯರು, ಆ ಕ್ರಾಸಿನಲ್ಲಿ ಜಿಂಕೆ ಮಾಂಸದ ಜುಗಾರಿ ಎಂಬಿತ್ಯಾದಿ ಸಾಲುಗಳ ಮೂಲಕ ತೇಜಸ್ವಿ ಕೃತಿಗಳನ್ನು ಮಾಂಸ ತಿನ್ನುವ ಜಾತಿಯ ಸಾಹಿತಿ ಎಂದು ಅವಹೇಳನೆ ಮಾಡಿ ಪೋಸ್ಟ್ ಹಾಕಲಾಗಿದೆ’ ಎಂದು ದೂರಿದರು.