ಬುಧವಾರ ವಿಜಯದಶಮಿ ಅಂಗವಾಗಿ ದೇವಿಗೆ ಗಜವಾಹಿನಿ ಅಲಂಕಾರ ಮಾಡಲಾಗುತ್ತದೆ. ಮಧ್ಯಾಹ್ನ 12.30ಕ್ಕೆ ದೇವಿಯ ಮೂರ್ತಿ ವಿಸರ್ಜನೆ ನಡೆಯುತ್ತದೆ. ವಿಸರ್ಜನೆ ಅಂಗವಾಗಿ ಗ್ರಾಮ ದೇವತೆಗಳಾದ ಗುತ್ತ್ಯಮ್ಮ, ಅಂತರಘಟ್ಟಮ್ಮ ಹಾಗೂ ಕೊಟ್ಟೂರು ಬಸವೇಶ್ವರ ದೇವತೆಗಳೊಂದಿಗೆ ರಾಜಬೀದಿಯಲ್ಲಿ ಉತ್ಸವ ಮತ್ತು ಶಮೀಪೂಜೆ ಅಂಬು ಹೊಡೆಯುವುದು ಮತ್ತು ಬನ್ನಿ ಮುರಿಯುವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಸಿಡಿಮದ್ದಿನ ಪ್ರದರ್ಶನ ನಂತರ ತೆಪ್ಪೋತ್ಸವದೊಂದಿಗೆ ಭದ್ರಾ ಹಿನ್ನೀರಿನಲ್ಲಿ ಮೂರ್ತಿ ವಿಸರ್ಜನೆ ಮಾಡಲಾಗುತ್ತದೆ.