ಪಟ್ಟಣದ ಪಿಎಲ್ಡಿ ಬ್ಯಾಂಕ್ ಸಭಾಂಗಣದ ಎದುರಿನ ಈ ಶೌಚಾಲಯವು ದುಃಸ್ಥಿತಿಗೆ ತಲುಪಿ, ಹತ್ತು ವರ್ಷಗಳಾಗಿವೆ. ದುರಸ್ತಿಯೂ ಮಾಡಿಲ್ಲ, ತೆರವೂ ಮಾಡಿಲ್ಲ. ಈ ಶೌಚಾಲಯದ ಎದುರು ಪಿಎಲ್ಡಿ ಬ್ಯಾಂಕ್ ಕಚೇರಿ, ಭಗೀರಥ ಉಪ್ಪಾರ ವಿದ್ಯಾರ್ಥಿ ನಿಲಯ ಹಾಗೂ ಹಲವು ಕಚೇರಿ – ಕಟ್ಟಡಗಳಿವೆ. ಈ ಜಾಗವನ್ನು ಸದುಪಯೋಗ ಪಡಿಸಬೇಕು ಎಂದು ಜನತೆ ಆಗ್ರಹಿಸಿದ್ದಾರೆ.