<p><strong>ಚಿಕ್ಕಮಗಳೂರು:</strong> ಯುಗಾದಿ ಆಚರಣೆಗೆ ಜನ ಸಂಭ್ರಮದಿಂದ ಮುಂದಾಗಿದ್ದು, ಖರೀದಿ ಜೋರಾಗಿ ನಡೆಯಿತು.</p>.<p>ಯುಗಾದಿ ಹಬ್ಬದ ಹಿಂದಿನ ದಿನವಾದ ಬುಧವಾರ ನಗರದಲ್ಲಿ ಮಾವಿನ ಸೊಪ್ಪು, ಬೇವಿನ ಸೊಪ್ಪು ತಂದು ರಸ್ತೆ ಬದಿ ರಾಶಿ ಹಾಕಿ ಮಾರಾಟ ಮಾಡಲಾಯಿತು.</p>.<p>ಹನುಮಂತಪ್ಪ ವೃತ್ತ, ಬಸವನಹಳ್ಳಿ ಮುಖ್ಯರಸ್ತೆ, ಅಂಬೇಡ್ಕರ್ ರಸ್ತೆ, ದೀಪಾ ನರ್ಸಿಂಗ್ ಹೋಂ ರಸ್ತೆ, ಬೈಪಾಸ್ ರಸ್ತೆ, ದಂಟರಮಕ್ಕಿ ವೃತ್ತ, ಎಂ.ಜಿ. ರಸ್ತೆ, ಶೃಂಗಾರ್ ಸರ್ಕಲ್, ವಿಜಯಪುರ ಸೇರಿ ನಗರದ ವಿವಿಧೆಡೆ ಹೂವು, ಹಣ್ಣು, ಮಾವಿನ ಎಲೆ, ಬಾಳೆಗಿಡ, ಬೇವು ಮಾರಾಟವಾಯಿತು.</p>.<p>ನಗರದ ಪ್ರಮುಖ ಮಾರುಕಟ್ಟೆಗಳು, ಬಟ್ಟೆ ಅಂಗಡಿಗಳು, ದಿನಸಿ ಅಂಗಡಿ, ಹೂವು- ಹಣ್ಣು ಅಂಗಡಿ, ಬೇಕರಿ, ಸಿಹಿ ಅಂಗಡಿಗಳಲ್ಲಿ, ಚಿನ್ನದ ಅಂಗಡಿಗಳಲ್ಲಿ ಜನ ಜಂಗುಳಿ ಕಂಡು ಬಂತು. ಯುಗಾದಿ ಹಬ್ಬಕ್ಕೆ ಹೊಸ ಬಟ್ಟೆ ಧರಿಸುವ ಸಂಪ್ರದಾಯವಿದ್ದು, ನಗರದ ಬಟ್ಟೆ ಅಂಗಡಿಗಳು ಬುಧವಾರ ಭರ್ತಿಯಾಗಿದ್ದವು.</p>.<p>ನಗರದ ಹೂವಿನ ಮಾರುಕಟ್ಟೆ, ದೀಪಾ ನರ್ಸಿಂಗ್ ಹೋಂ ರಸ್ತೆಯಲ್ಲಿ ಹೂವು, ಬೇವು, ಮಾವಿನ ಎಲೆ, ಬಾಳೆ ಗಿಡ ಖರೀದಿಯಲ್ಲಿ ಗ್ರಾಹಕರು ನಿರತರಾಗಿದ್ದರು. ಒಂದು ಮಾರು ಸೇವಂತಿಗೆ ₹100, ಚಂಡು ಹೂವು ₹60, ಮಲ್ಲಿಗೆ ಹೂವು ₹100, ಗುಲಾಬಿ ಹೂವು ₹60, ಬೇವಿನ ಸೊಪ್ಪು ಒಂದು ಕಟ್ಟಿಗೆ ₹20, ಬಾಳೆ ಗಿಡ ಜೋಡಿ ₹50, ಬಾಳೆಎಲೆ ಜೋಡಿ ₹10ಕ್ಕೆ ಮಾರಾಟ ನಡೆಯಿತು. ಈ ಬಾರಿ ಯುಗಾದಿ ಹಬ್ಬಕ್ಕೆ ಹಣ್ಣುಗಳ ಬೆಲೆ ಸ್ವಲ್ಪ ಹೆಚ್ಚಾಗಿದ್ದು, ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರ ₹20ರಿಂದ ₹40 ತನಕ ಹೆಚ್ಚಳ ಕಂಡಿದೆ.</p>.<p>ಒಂದು ಕೆ.ಜಿ ಸೇಬು ₹240, ಮಾವಿನ ಹಣ್ಣು ₹200, ಕಿತ್ತಲೆ ಹಣ್ಣು ₹100, ದ್ರಾಕ್ಷಿ ಹಣ್ಣು ₹120, ಬಾಳೆಹಣ್ಣು ₹80, ದಾಳಿಂಬೆ ಹಣ್ಣು ₹240, ಮೂಸಿಂಬೆ ಹಣ್ಣು ₹100, ಕಲ್ಲಂಗಡಿ ₹25, ಕರ್ಬುಜ ₹40 ಇತ್ತು.</p>.<p>ಗುರುನಾಥ ಚಿತ್ರಮಂದಿರ ರಸ್ತೆ, ವಿಜಯಪುರ ಸೇರಿದಂತೆ ವಿವಿಧೆಡೆ ಯುಗಾದಿ ಹಬ್ಬಕ್ಕಾಗಿ ಗೃಹ ಅಲಂಕಾರಿಕ ವಸ್ತುಗಳು ಹಾಗೂ ವಾಹನ ಸಿಂಗರಿಸುವ ವಸ್ತುಗಳ ಖರೀದಿಯಲ್ಲಿ ಗ್ರಾಹಕರು ತೊಡಗಿದ್ದರು.</p>.<p> <strong>ರಂಜಾನ್ ಆಚರಣೆಗೆ ಸಿದ್ಧತೆ</strong> </p><p>ರಂಜಾನ್ ಆಚರಣೆಗೂ ಮುಸ್ಲಿಂ ಸಮುದಾಯದವರು ತಯಾರಿ ನಡೆಸುತ್ತಿದ್ದಾರೆ. ಈದ್ಗಾ ಮೈದಾನವನ್ನು ಬುಧವಾರ ಸ್ವಚ್ಛ ಮಾಡಲಾಯಿತು. ಬಣ್ಣ ಬಳಿದು ಸಿಂಗಾರ ಮಾಡಲಾಯಿತು. ಹಬ್ಬದ ದಿನ ಹೊಸ ಬಟ್ಟೆ ಧರಿಸುವುದು ಸಾಮಾನ್ಯ. ಆದ್ದರಿಂದ ಬಟ್ಟೆ ಅಂಗಡಿಗಳು ತುಂಬಿ ತುಳುಕಿದವು. ಚಪ್ಪಲಿ ಆಭರಣಗಳು ಅಲಂಕಾರಿಕ ವಸ್ತಗಳ ಮಾರಾಟವೂ ಜೋರಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ಯುಗಾದಿ ಆಚರಣೆಗೆ ಜನ ಸಂಭ್ರಮದಿಂದ ಮುಂದಾಗಿದ್ದು, ಖರೀದಿ ಜೋರಾಗಿ ನಡೆಯಿತು.</p>.<p>ಯುಗಾದಿ ಹಬ್ಬದ ಹಿಂದಿನ ದಿನವಾದ ಬುಧವಾರ ನಗರದಲ್ಲಿ ಮಾವಿನ ಸೊಪ್ಪು, ಬೇವಿನ ಸೊಪ್ಪು ತಂದು ರಸ್ತೆ ಬದಿ ರಾಶಿ ಹಾಕಿ ಮಾರಾಟ ಮಾಡಲಾಯಿತು.</p>.<p>ಹನುಮಂತಪ್ಪ ವೃತ್ತ, ಬಸವನಹಳ್ಳಿ ಮುಖ್ಯರಸ್ತೆ, ಅಂಬೇಡ್ಕರ್ ರಸ್ತೆ, ದೀಪಾ ನರ್ಸಿಂಗ್ ಹೋಂ ರಸ್ತೆ, ಬೈಪಾಸ್ ರಸ್ತೆ, ದಂಟರಮಕ್ಕಿ ವೃತ್ತ, ಎಂ.ಜಿ. ರಸ್ತೆ, ಶೃಂಗಾರ್ ಸರ್ಕಲ್, ವಿಜಯಪುರ ಸೇರಿ ನಗರದ ವಿವಿಧೆಡೆ ಹೂವು, ಹಣ್ಣು, ಮಾವಿನ ಎಲೆ, ಬಾಳೆಗಿಡ, ಬೇವು ಮಾರಾಟವಾಯಿತು.</p>.<p>ನಗರದ ಪ್ರಮುಖ ಮಾರುಕಟ್ಟೆಗಳು, ಬಟ್ಟೆ ಅಂಗಡಿಗಳು, ದಿನಸಿ ಅಂಗಡಿ, ಹೂವು- ಹಣ್ಣು ಅಂಗಡಿ, ಬೇಕರಿ, ಸಿಹಿ ಅಂಗಡಿಗಳಲ್ಲಿ, ಚಿನ್ನದ ಅಂಗಡಿಗಳಲ್ಲಿ ಜನ ಜಂಗುಳಿ ಕಂಡು ಬಂತು. ಯುಗಾದಿ ಹಬ್ಬಕ್ಕೆ ಹೊಸ ಬಟ್ಟೆ ಧರಿಸುವ ಸಂಪ್ರದಾಯವಿದ್ದು, ನಗರದ ಬಟ್ಟೆ ಅಂಗಡಿಗಳು ಬುಧವಾರ ಭರ್ತಿಯಾಗಿದ್ದವು.</p>.<p>ನಗರದ ಹೂವಿನ ಮಾರುಕಟ್ಟೆ, ದೀಪಾ ನರ್ಸಿಂಗ್ ಹೋಂ ರಸ್ತೆಯಲ್ಲಿ ಹೂವು, ಬೇವು, ಮಾವಿನ ಎಲೆ, ಬಾಳೆ ಗಿಡ ಖರೀದಿಯಲ್ಲಿ ಗ್ರಾಹಕರು ನಿರತರಾಗಿದ್ದರು. ಒಂದು ಮಾರು ಸೇವಂತಿಗೆ ₹100, ಚಂಡು ಹೂವು ₹60, ಮಲ್ಲಿಗೆ ಹೂವು ₹100, ಗುಲಾಬಿ ಹೂವು ₹60, ಬೇವಿನ ಸೊಪ್ಪು ಒಂದು ಕಟ್ಟಿಗೆ ₹20, ಬಾಳೆ ಗಿಡ ಜೋಡಿ ₹50, ಬಾಳೆಎಲೆ ಜೋಡಿ ₹10ಕ್ಕೆ ಮಾರಾಟ ನಡೆಯಿತು. ಈ ಬಾರಿ ಯುಗಾದಿ ಹಬ್ಬಕ್ಕೆ ಹಣ್ಣುಗಳ ಬೆಲೆ ಸ್ವಲ್ಪ ಹೆಚ್ಚಾಗಿದ್ದು, ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರ ₹20ರಿಂದ ₹40 ತನಕ ಹೆಚ್ಚಳ ಕಂಡಿದೆ.</p>.<p>ಒಂದು ಕೆ.ಜಿ ಸೇಬು ₹240, ಮಾವಿನ ಹಣ್ಣು ₹200, ಕಿತ್ತಲೆ ಹಣ್ಣು ₹100, ದ್ರಾಕ್ಷಿ ಹಣ್ಣು ₹120, ಬಾಳೆಹಣ್ಣು ₹80, ದಾಳಿಂಬೆ ಹಣ್ಣು ₹240, ಮೂಸಿಂಬೆ ಹಣ್ಣು ₹100, ಕಲ್ಲಂಗಡಿ ₹25, ಕರ್ಬುಜ ₹40 ಇತ್ತು.</p>.<p>ಗುರುನಾಥ ಚಿತ್ರಮಂದಿರ ರಸ್ತೆ, ವಿಜಯಪುರ ಸೇರಿದಂತೆ ವಿವಿಧೆಡೆ ಯುಗಾದಿ ಹಬ್ಬಕ್ಕಾಗಿ ಗೃಹ ಅಲಂಕಾರಿಕ ವಸ್ತುಗಳು ಹಾಗೂ ವಾಹನ ಸಿಂಗರಿಸುವ ವಸ್ತುಗಳ ಖರೀದಿಯಲ್ಲಿ ಗ್ರಾಹಕರು ತೊಡಗಿದ್ದರು.</p>.<p> <strong>ರಂಜಾನ್ ಆಚರಣೆಗೆ ಸಿದ್ಧತೆ</strong> </p><p>ರಂಜಾನ್ ಆಚರಣೆಗೂ ಮುಸ್ಲಿಂ ಸಮುದಾಯದವರು ತಯಾರಿ ನಡೆಸುತ್ತಿದ್ದಾರೆ. ಈದ್ಗಾ ಮೈದಾನವನ್ನು ಬುಧವಾರ ಸ್ವಚ್ಛ ಮಾಡಲಾಯಿತು. ಬಣ್ಣ ಬಳಿದು ಸಿಂಗಾರ ಮಾಡಲಾಯಿತು. ಹಬ್ಬದ ದಿನ ಹೊಸ ಬಟ್ಟೆ ಧರಿಸುವುದು ಸಾಮಾನ್ಯ. ಆದ್ದರಿಂದ ಬಟ್ಟೆ ಅಂಗಡಿಗಳು ತುಂಬಿ ತುಳುಕಿದವು. ಚಪ್ಪಲಿ ಆಭರಣಗಳು ಅಲಂಕಾರಿಕ ವಸ್ತಗಳ ಮಾರಾಟವೂ ಜೋರಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>