ಗೊರಿಕ್ ಅವರು, ಕರ್ನಾಟಕದ ಮೇಲುಕೋಟೆ, ಹೆಡತಲೆ, ಸಾಲಿಗ್ರಾಮ, ಶಾಂತಿಗ್ರಾಮ ಮುಂತಾದೆಡೆ ಇರುವ ನರಸಿಂಹ ದೇಗುಲಗಳು, ಅಲ್ಲಿನ ವಿಶೇಷತೆಗಳನ್ನು ಅಧ್ಯಯನ ಮಾಡಿ ಒಂದು ಪುಸ್ತಕ ಪ್ರಕಟಿಸಿದ್ದಾರೆ. ‘ನರಸಿಂಹ- ಲಾಸ್ಟ್ ಟೆಂಪಲ್ಸ್’ ಎಂಬ ಪುಸ್ತಕದಲ್ಲಿ ರಾಜ್ಯದ ನರಸಿಂಹ ಕ್ಷೇತ್ರಗಳ ಸಮಗ್ರ ವಿವರಗಳಿವೆ. ಅಪೂರ್ವ ಚಿತ್ರಗಳಿವೆ. ಯಾವುದೇ ಭಾಗದಲ್ಲಿ ನರಸಿಂಹ ದೇಗುಲಗಳ ಬಗ್ಗೆ ಮಾಹಿತಿ ದೊರೆತರೆ ಅಲ್ಲಿಗೇ ಹೋಗಿ ಅಧ್ಯಯನ ಮಾಡಿ ವಿವರ ದಾಖಲಿಸುವ ಕಾರ್ಯ ಇವರಿಗೆ ಪ್ರಿಯವಾದುದು.