ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಧನ ಕುಟುಂಬಕ್ಕೆ ನೆರವು: ಗುರೂಜಿ

ಯೋಧ ಮಸೀಗದ್ದೆ ಗಣೇಶ್‌ ನಾಯಕ್
Last Updated 1 ಜುಲೈ 2022, 2:30 IST
ಅಕ್ಷರ ಗಾತ್ರ

ಬಾಳೆಹೊನ್ನೂರು: ಈಚೆಗೆ ಮೃತಪಟ್ಟ ಇಲ್ಲಿಗೆ ಸಮೀಪದ ಮಸೀಗದ್ದೆಯ ಯೋಧ ಗಣೇಶ್ನಾಯಕ್ ಮನೆಗೆ ಗೌರಿಗದ್ದೆಯ ದತ್ತಾಶ್ರಮದ ಅವಧೂತ ವಿನಯ ಗುರೂಜಿ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಗಣೇಶ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವಿಸಿದ ಬಳಿಕ ಯೋಧನ ಪತ್ನಿ ಶ್ವೇತ, ಪೋಷಕರಾದ ನಾಗಯ್ಯ, ಗಂಗಮ್ಮ ಅವರೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿ ಸಾಂತ್ವನ ಹೇಳಿದರು.

ಪೋಷಕರಿಗೆ ₹55 ಸಾವಿರ ಧನ ಸಹಾಯ ನೀಡಿದ ಅವರು ಗಣೇಶ್ ಅವರ ಪುತ್ರಿ ಅದ್ಯಾ ಅವರ ವಿದ್ಯಾಭ್ಯಾಸದ ಸಂಪೂರ್ಣ ಖರ್ಚು ವೆಚ್ಚವನ್ನು ದತ್ತಾಶ್ರಮದಿಂದ ಭರಿಸಲಾಗುವುದು ಎಂದು ಅವರು ತಿಳಿಸಿದರು.

ದತ್ತಾಶ್ರಮದ ಟ್ರಸ್ಟಿಗಳಾದ ಕೂಳೂರಿನ ಶೃಂಗೇಶ್ವರರಾವ್, ಜಯವಂತ ಭಟ್ ,ಜಯಪುರದ ಚಂದ್ರಣ್ಣ, ದತ್ತಾಶ್ರಮದ ಅಪ್ತ ಕಾರ್ಯದರ್ಶಿ ಮಿಥುನ್, ಎಸ್.ಜೆ.ಜಯಶೀಲ, ಮಸೀಗದ್ದೆ ಸತೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT