ಬೆಂಗಳೂರು: ವಸಂತನಗರದ ಕೆಪಿಸಿಸಿ ಕಚೇರಿ ಬಳಿ ಪಾಲಿಕೆಯ 3 ಎಕರೆ 29 ಗುಂಟೆ ಆಸ್ತಿಯನ್ನು ಒತ್ತುವರಿ ಮಾಡಿಕೊಂಡ ಆರೋಪದಡಿ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ನಲಪಾಡ್ ಮೊಹಮದ್ ಸೇರಿ 18 ಜನರ ವಿರುದ್ಧ ಬೆಂಗಳೂರು ಮಹಾನಗರ ಕಾರ್ಯಪಡೆಯಲ್ಲಿ (ಬಿಎಂಟಿಎಫ್) ಫೆಬ್ರುವರಿ 23ರಂದು ಎಫ್ಐಆರ್ ದಾಖಲಾಗಿದೆ.
ವಸಂತನಗರದ ಕಂದಾಯ ಇನ್ಸ್ಪೆಕ್ಟರ್ ಸೀತಾರಾಂ ಅವರು ನಲಪಾಡ್ ವಿರುದ್ಧ ಹಾಗೂ ಸಹಾಯಕ ಕಂದಾಯ ಅಧಿಕಾರಿ ಲಿಂಗಯ್ಯ 17 ಜನರ ವಿರುದ್ಧ ದೂರು ನೀಡಿದ್ದಾರೆ.
ಅಧಿಕಾರಿಗಳು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಬಳಿಕ, ಆರೋಪಿಗಳಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ಬಿಎಂಟಿಎಫ್ ಅಧಿಕಾರಿ ತಿಳಿಸಿದರು.