ಅಜ್ಜಂಪುರ: ತಾಲ್ಲೂಕಿನ ಚೌಳಹಿರಿಯೂರು ಹೋಬಳಿಯ ಕಲ್ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಹಳ್ಳಿ ಗುಡ್ಡದ ಮರಗಿಡಗಳಿಗೆ ಗುರುವಾರ ರಾತ್ರಿ ಬೆಂಕಿ ಬಿದ್ದಿದೆ.
ಗುಡ್ಡಭಾಗದಲ್ಲಿದ್ದ ಅರಣ್ಯ ಇಲಾಖೆಗೆ ಒಳಪಟ್ಟ ಹಲವಾರು ಮರ- ಗಿಡಗಳು ಬೆಂಕಿಗೆ ಆಹುತಿ ಆಗಿವೆ. ಇದಕ್ಕೆ ಹೊಂದಿಕೊಂಡಿದ್ದ ಲಂಬಾಣಿ ತಾಂಡ್ಯದ ಸಾಕಮ್ಮ ಪುಟ್ಟಾನಾಯ್ಕ ಅವರಿಗೆ ಸೇರಿದ 12 ತೆಂಗಿನ ಮರಗಳು ಸುಟ್ಟುಹೋಗಿದೆ.
‘ಸ್ಥಳಕ್ಕೆ ಕಡೂರು ಅಗ್ನಿಶಾಮಕ ದಳ ಭೇಟಿ ನೀಡಿ, ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದೆ. ಗಾಳಿ ಪ್ರಮಾಣ ಹೆಚ್ಚಿರುವುದು ಬೆಂಕಿಯ ತೀವ್ರತೆ ಅಧಿಕಗೊಳಿಸಿದೆ. ಹೀಗಾಗಿ, ಬೆಂಕಿ ನಂದಿಸುವ ಕಾರ್ಯಕ್ಕೆ ಹಿನ್ನಡೆ ಉಂಟು ಮಾಡಿದೆ’ ಎಂದು ಸ್ಥಳದಲ್ಲಿದ್ದ ಚೇತನ್ ತಿಳಿಸಿದ್ದಾರೆ.