ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಬಳಿ ಭದ್ರಾ ಬಲದಂಡೆ ನಾಲೆಗೆ ಬೊಲೊರೊ ಪಿಕ್ಅಪ್ ವಾಹನ ಉರುಳಿದೆ. ಸರ್ವಮಂಗಳಾ ನೀರುಪಾಲಾಗಿದ್ದು, ಪತಿ ಸಂತೋಷ್ ಜೈನ್ ಪಾರಾಗಿದ್ದಾರೆ.
ಸೋಮಪುರದ ಈ ದಂಪತಿ ದೇಗುಲಕ್ಕೆ ತೆರಳಿ ವಾಪಸಾಗುವಾಗ ಅವಘಡ ಸಂಭವಿಸಿದೆ.ಬ್ರೇಕ್ ವಿಫಲವಾಗಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಕಾಲುವೆಗೆ ಉರುಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರ್ವಮಂಗಳಾ ಅವರಿಗಾಗಿ ಕಾಲುವೆಯಲ್ಲಿ ಶೋಧ ಕಾರ್ಯಾಚರಣೆ ಶುರುವಾಗಿದೆ. ವಾಹನವನ್ನು ಕಾಲುವೆಯಿಂದ ಹೊರಕ್ಕೆ ತೆಗೆಯಲಾಗಿದೆ.