ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರ್ಜ್ ಮಾಡುತ್ತಿದ್ದೆ; ಮನೆಯಲ್ಲೂ ಕೆಲಸ ಮಾಡಿದ್ದೇನೆ

Last Updated 3 ಮೇ 2019, 5:12 IST
ಅಕ್ಷರ ಗಾತ್ರ

ಚಿತ್ರದುರ್ಗ: ನಾಲ್ಕೈದು ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ವಿಚಾರವಾಗಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಸತ್ಯಭಾಮ ನಡುವೆ ಮಾತಿನ ವಾಗ್ವಾದ ನಡೆಯಿತು.

* ಜಿ.ಎಚ್‌.ತಿಪ್ಪಾರೆಡ್ಡಿ, ಶಾಸಕ. ನೀತಿ ಸಂಹಿತೆ ಇಲ್ಲದಿದ್ದರೆ, ಚಾರ್ಜ್‌ ಮಾಡುತ್ತಿದ್ದೆ.

* ಸಿ.ಸತ್ಯಭಾಮ, ಸಿಇಒ. ನನ್ನ ಮೇಲೆ ಹೇಗೆ ಚಾರ್ಜ್ ಮಾಡುತ್ತೀರಾ. ನನ್ನ ಕರ್ತವ್ಯ ಸರಿಯಾಗಿಯೇ ಮಾಡುತ್ತಿದ್ದೇನೆ.

* ತಿಪ್ಪಾರೆಡ್ಡಿ. ತುರ್ತು ಸಂದರ್ಭದಲ್ಲಿ ಕೇಂದ್ರ ಬಿಡುವಂತಿಲ್ಲ. ಕಚೇರಿಯಲ್ಲೂ ನೀವು ಇರಲಿಲ್ಲ ಎಂಬ ಮಾಹಿತಿ ಇದೆ.

* ಸತ್ಯಭಾಮ. ನಾನೂ ಇರಲಿಲ್ಲ ಎಂದು ಹೇಗೆ ಹೇಳುತ್ತೀರಾ. ಭಾನುವಾರ ರಜೆಯಾದರೂ ಮನೆಯಲ್ಲಿಯೇ ಇದ್ದು, ಎರಡು ಬಾಕ್ಸ್‌ಗಳ ಕಚೇರಿಯ ಫೈಲ್ ಕ್ಲಿಯರ್ ಮಾಡಿದ್ದೇನೆ. ಜಿಲ್ಲಾ ಪಂಚಾಯಿತಿಯಲ್ಲಿ ನೂರಾರು ಕೆಲಸ ಕಾರ್ಯಗಳಿರುತ್ತವೆ. ಹೀಗಿರುವಾಗ ನನ್ನ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ.

* ತಿಪ್ಪಾರೆಡ್ಡಿ. ಆಕ್ರೋಶದಿಂದ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ರುಜು ಹಾಕಿರಬಹುದು. ನೀವು ಊರಿನಲ್ಲಿ ಇರಲಿಲ್ಲ ಎಂಬುದನ್ನು ನಿಮ್ಮ ಕಚೇರಿಯಿಂದಲೇ ತಿಳಿದುಕೊಂಡಿದ್ದೇನೆ.

* ಸತ್ಯಭಾಮ. ಒಂದು ನಿಮಿಷ ಸರ್. ಒಂದು ನಿಮಿಷ. ಮಾತನಾಡಲು ಅವಕಾಶ ಕೊಡಿ. ಕರ್ತವ್ಯದ ನಿಮಿತ್ತ ಹೋಗಿದ್ದೆ. ಶನಿವಾರ ಬಹುಮುಖ್ಯವಾದ ಸಭೆ ಇತ್ತು. ಸಿಆರ್ ಇದ್ದರೂ ಭಾನುವಾರ ಕೆಲಸ ಮಾಡಿದ್ದೇನೆ.

* ತಿಪ್ಪಾರೆಡ್ಡಿ. ಹಾಗೆ ಹೇಳಿ ಮತ್ತೆ. ಊರಲ್ಲಿ ಇದ್ದೆ ಅಂಥ ಹೇಳುತ್ತಿದ್ದಿರಲ್ಲ.

* ಸತ್ಯಭಾಮ. ಸೋಮವಾರ ಬೆಳಿಗ್ಗೆ 10.30ರಿಂದಲೇ ಕಚೇರಿಯಲ್ಲಿ ಇದ್ದೆನೆ. ನಡೀರಪ್ಪ ಹೋಗೋಣ. ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆ.

* ತಿಪ್ಪಾರೆಡ್ಡಿ. ಆರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. 25 ವರ್ಷಗಳಲ್ಲಿ ಎಂದಿಗೂ ಜನರನ್ನು ಕರೆದುಕೊಂಡು ಈ ರೀತಿ ಜಿಲ್ಲಾ ಪಂಚಾಯಿತಿ ಕಚೇರಿ ಬಳಿಗೆ ಬಂದಿರಲಿಲ್ಲ. ವೈಯಕ್ತಿಕ ಹಿತಾಸಕ್ತಿಯಿಂದ ಯಾರೂ ಇಲ್ಲಿಗೆ ಬಂದಿಲ್ಲ. ಸಾರ್ವಜನಿಕರ ಸಮಸ್ಯೆ ಪರಿಹರಿಸುವಂತೆ ಚರ್ಚಿಸಲು ಬಂದಿದ್ದೇವೆ. ಹಿರಿಯ ರಾಜಕಾರಣಿಯಾಗಿ ರಾಜಕೀಯದಲ್ಲಿ ಅನುಭವ ಹೊಂದಿದ್ದೇನೆ. ನಾನೂ ಅಧಿಕಾರಿಗಳನ್ನು ಅಗೌರವದಿಂದ ನಡೆಸಿಕೊಂಡಿಲ್ಲ.

* ಸತ್ಯಭಾಮ. ಜನರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿಯೇ ಕೆಲಸ ಮಾಡುತ್ತಿದ್ದೇನೆ. ಗ್ರಾಮೀಣ ಪ್ರದೇಶಗಳ ಸಮಸ್ಯೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಬಗೆಹರಿಸಿದ್ದರೆ, ನನ್ನ ಕೊಠಡಿಯವರೆಗೂ ಜನ ಬರುವ ಅಗತ್ಯವೇ ಇರುತ್ತಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT