‘ನಮ್ಮ ಊರಿಗೆ ಬಸ್ ವ್ಯವಸ್ಥೆ ಇಲ್ಲ. ಗ್ರಾಮಸ್ಥರು ಬೇರೆ ಕಡೆ ಹೋಗಲು ಬೈಕ್ಗಳನ್ನು ಬಳಸುತ್ತಾರೆ. ಬೈಕ್ ಇಲ್ಲದವರು ಆಟೊಗಳಿಗೆ ಮೊರೆ ಹೋಗುತ್ತಾರೆ. ಗ್ರಾಮದಲ್ಲಿ ಮೂರು ಆಟೊಗಳಿದ್ದು, ನಿತ್ಯ ಪಟ್ಟಣಕ್ಕೆ ಸಂಚರಿಸುತ್ತವೆ. ಜನ ಇದೇ ಆಟೊಗಳಲ್ಲಿ ಬಂದು ಮತ ಚಲಾಯಿಸಬೇಕು. ವೃದ್ಧರು, ಅಂಗವಿಕಲರು, ರೋಗಿಗಳು ಬೇರೆ ಊರಿಗೆ ಹೋಗಿ ಮತ ಚಲಾಯಿಸುವುದು ಕಷ್ಟ. ಚುನಾವಣಾ ಆಯೋಗದವರು ಮತದಾನ ನಿಮ್ಮ ಹಕ್ಕು, ತಪ್ಪದೇ ಮತ ಚಲಾಯಿಸಿ ಎಂದು ಜಾಗೃತಿ ಮೂಡಿಸುತ್ತಾರೆ. ಆದರೆ ಅಗತ್ಯ ಇರುವ ಕಡೆ ಮತಗಟ್ಟೆ ಸ್ಥಾಪಿಸಿದರೆ ಮಾತ್ರ ಹೆಚ್ಚು ಮತದಾನ ಆಗಲಿದೆ. ನಮ್ಮ ಊರಿಗೂ ಒಂದು ಮತಗಟ್ಟೆ ಸ್ಥಾಪಿಸಬೇಕು’ ಎಂದು ಆಗ್ರಹಿಸುತ್ತಾರೆ ಗ್ರಾಮದ ಯುವಕರಾದ ಎಸ್.ಧೋಮಪ್ಪ, ಮಂಜುನಾಥ, ಕೃಷ್ಣಮೂರ್ತಿ, ಮಲ್ಲಿಕಾರ್ಜುನ್, ನಾಗರಾಜ್.