ಹಚ್ಚಿರುವ ನಂದಾದೀಪ 21 ದಿನಗಳ ಕಾಲ ನಂದಿ ಹೋಗದಂತೆ ದೇಗುಲದ ಪೂಜಾರಿ ಉಸ್ತುವಾರಿ ವಹಿಸಿದ್ದಾರೆ. ಪ್ರತಿದಿನ ಸಂಜೆಯಿಂದ ತಡರಾತ್ರಿ ವರೆಗೂ ಸಾಮಾಜಿಕ ಅಂತರ ಕಾಪಾಡುವುದರೊಂದಿಗೆ ಏಳೆಂಟು ಮಂದಿ ದೇಗುಲದೊಳಗೆ ಕುಳಿತು ಭಜನೆ ಮಾಡುತ್ತಾರೆ. ನಂದಾದೀಪ ಆಚರಣೆಯ ಈ 21 ದಿನಗಳು ಗ್ರಾಮದ ಯಾವುದೇ ಮನೆಯಲ್ಲಿ ಯಾವುದೇ ಮಾಂಸಾಹಾರದ ಅಡುಗೆ ಮಾಡುವಂತಿಲ್ಲ. ಗ್ರಾಮದ ರೈತರು ಬೆಳೆದಿರುವ ಸೊಪ್ಪು, ತರಕಾರಿಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಬಾರದು. ಊರುಬಿಟ್ಟು ಬೇರೆ ಊರಿಗೆ ಹೋಗಿ ಮತ್ತೆ ಬರಬಾರದು. ಸಾಕಿರುವ ನಾಟಿಕೋಳಿಯನ್ನು ಗ್ರಾಮದಿಂದ ಹೊರಗೆ ಹಾಕಬೇಕು. ಗ್ರಾಮದೊಳಗೆ ಯಾರೂ ಚಪ್ಪಲಿ ಹಾಕಿಕೊಂಡು ಓಡಾಡುವಂತ್ತಿಲ್ಲ ಎಂಬ ನಿರ್ಬಂಧ ವಿಧಿಸಲಾಗಿದೆ.