ದೇವಸಮುದ್ರ ಹೋಬಳಿಯಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆ ಯಾಶ್ರಿತ ಪ್ರದೇಶದಲ್ಲಿ ಪ್ರಮುಖವಾಗಿ ಮೆಕ್ಕೆಜೋಳ, ಹತ್ತಿ, ಮೆಣಸಿನಕಾಯಿ ಬಿತ್ತನೆ ಮಾಡಲಾಗುತ್ತದೆ. ಬುಧವಾರದಿಂದ ಸಂತೇಗುಡ್ಡ, ಬಾಂಡ್ರಾವಿ, ಜಾಗೀರಬುಡ್ಡೇನಹಳ್ಳಿ, ಮೇಗಲಕಣಿವೆ, ಶಿರೇಕೊಳ, ತಮ್ಮೇನಹಳ್ಳಿ, ದೇವಸಮುದ್ರ, ವೆಂಕಟಾಪುರ, ಅಶೋಕ ಸಿದ್ದಾಪುರ, ಬಸಾಪುರ, ಹುಚ್ಚಂಗಿದುರ್ಗ, ಮೇಗಲಕಣಿವೆ, ಬೊಮ್ಮದೇವರಹಳ್ಳಿ, ಹೊಸ ದಡಗೂರು ಸೇರಿ ಸುತ್ತಲಿನಗ್ರಾಮಗಳಲ್ಲಿ ಬಿತ್ತನೆ ಆರಂಭಿಸಲಾಗಿದೆ ಎಂದು ರಾಂಪುರ ನಾಡಕಚೇರಿ ಶೀರಸ್ತೇದಾರ್ ಗೋಪಾಲ್ ಮಾಹಿತಿ ನೀಡಿದರು.