‘ಕೂಲಿ ಮಾಡಿ ಕೂಡಿಟ್ಟ ಹಣದ ಜೊತೆಗೆ ನಮ್ಮ ಚಿಕ್ಕಪ್ಪನ ಹತ್ತಿರ ಸ್ವಲ್ಪ ಸಾಲ ಮಾಡಿ 2011ರಲ್ಲಿ ಕೊಳವೆ ಬಾವಿ ಕೊರೆಯಿಸಿದೆ. ಅಂದಿನಿಂದ ಅರಂಭಗೊಂಡ ಕೃಷಿ ಕಾಯಕದಲ್ಲಿ ಇಂದು 7 ಕೊಳವೆಬಾವಿಗಳನ್ನು ಕೊರೆಸಿದ್ದಾರೆ. 10 ಎಕರೆಯಲ್ಲಿ ಅಡಿಕೆ, 5 ಎಕರೆಯಲ್ಲಿ ದಾಳಿಂಬೆ, ಎರಡೂವರೆ ಎಕರೆ ಬಾಳೆ ಮತ್ತು ಎರಡೂವರೆ ಎಕರೆ ಮಾವು ತೆಂಗು ಬೆಳೆಸಿದ್ದಾರೆ. ವರ್ಷಕ್ಕೆ ಅಡಿಕೆಯಿಂದ ₹ 20 ಲಕ್ಷ, ಬಾಳೆಯಿಂದ ₹ 3 ಲಕ್ಷ, ದಾಳಿಂಬೆಯಿಂದ ₹ 2 ಲಕ್ಷ, ಹೀಗೆ ₹ 25 ಲಕ್ಷ ಹಣ ಗಳಿಸಿದ್ದಾರೆ‘ ರಾಜಣ್ಣ.