ಚಳ್ಳಕೆರೆ: ಬೆಂಗಳೂರು ರಸ್ತೆಯ ರೋಜಾ ಡಾಬಾದ ಬಳಿ ಶುಕ್ರವಾರ ಮುಂಜಾನೆ ಖಾಸಗಿ ಬಸ್ ರೈಲ್ವೆ ಬ್ರಿಡ್ಜ್ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿ 20 ಜನ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಾಸನದ ವಿ. ನೂತನ್ ಕೋಠಾರಿ, ಚನ್ನಪಟ್ಟಣದ ಶಿವರಾಜ್, ರಾಯಚೂರಿನ ನಾಗರಾಜ್, ಕಾರ್ತಿಕ್, ಪೀರಸಾಬ್, ಜಿ.ಅಕಿಲ, ಕೌಸರ್, ಜಯರಾಜ್, ಬಾದಾಮಿಯ ಶ್ರೀರಂಗ ಪೂಜಾರಿ, ಸಿಂಧನೂರಿನ ನಾಗರಾಜ ಸೇರಿ 15 ಜನ ಪ್ರಯಾಣಿಕರನ್ನು ಆಂಬುಲೆನ್ಸ್ನಲ್ಲಿ ಕೊಂಡೊಯ್ದು ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಲಕ ಬಸ್ ಅನ್ನು ಅತಿ ವೇಗವಾಗಿ ಚಲಾಯಿಸಿದ್ದೇ ಘಟನೆಗೆ ಕಾರಣವಾಗಿದ್ದು, ರೈಲ್ವೆ ಬ್ರಿಡ್ಜ್ಗೆ ಡಿಕ್ಕಿ ಹೊಡೆದ ರಭಸಕ್ಕೆ ಬಸ್ನ ಎಡಭಾಗ ಸಂಪೂರ್ಣ ನಜ್ಜು ಗುಜ್ಜಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪಿಎಸ್ಐ ಸತೀಶ್ನಾಯ್ಕ ತಿಳಿಸಿದ್ದಾರೆ.