ಈ ಬಾರಿಯ ಕಡುಬೇಸಿಗೆಯ ಬಿಸಿಲಿನ ಝಳಕ್ಕೆ ಹಲವೆಡೆ ಕೆರೆಕಟ್ಟೆ, ಕೃಷಿಹೊಂಡ, ಚೆಕ್ಡ್ಯಾಂ, ಬ್ಯಾರೇಜ್, ಗೋಕಟ್ಟೆಗಳಲ್ಲಿ ಹನಿ ನೀರಿಲ್ಲದೇ ಬರಿದಾಗಿವೆ. ಇದರಿಂದಾಗಿ ಜಲಮೂಲಗಳಲ್ಲಿ ಪಕ್ಷಿಗಳಿಗೆ ಆಹಾರ ಹಾಗೂ ನೀರು ಸಮರ್ಪಕವಾಗಿ ಸಿಗುತ್ತಿಲ್ಲ. ಹಲವೆಡೆ ಸರ್ಕಾರಿ ಜಮೀನು, ಅರಣ್ಯ ಪ್ರದೇಶ, ಗೋಮಾಳ ಒತ್ತುವರಿಯಾಗಿದೆ.